ಹಳದಿಕಾಮಾಲೆ ಬಾಧಿಸಿ ಯುವತಿ ಮೃತ್ಯು
ಕಾಸರಗೋಡು: ಹಳದಿ ಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಕೋ ಡೋಂಬೇಳೂರು ಪಂಚಾಯತ್ ಮಾಜಿ ಸಿಡಿಎಸ್ ಚೆಯರ್ ಪರ್ಸನ್ ಚುಳ್ಳಿಕೆರೆ ವೆಳ್ಳರಿಕುಂಡ್ನ ಲಲಿತ (40) ಮೃತಪಟ್ಟವರು.
ಒಂದು ವಾರ ಹಿಂದೆ ಇವರಿಗೆ ಹಳದಿ ಕಾಮಾಲೆ ಬಾಧಿಸಿತ್ತು. ಅಸೌಖ್ಯ ಉಲ್ಭಣಗೊಂಡು ಚಿಕಿತ್ಸೆಗೆ ಭಾರೀ ಮೊತ್ತ ಅನಿವಾರ್ಯವಾ ದುದರಿಂದ ನಾಗರಿಕರು ಚಿಕಿತ್ಸಾ ಸಮಿತಿ ರೂಪೀಕರಿಸಿ ಹಣ ಸಂಗ್ರ ಹಿಸುವ ಕಾರ್ಯ ಆರಂಭಿಸಿದ್ದರು.
ಮೃತರು ಪತಿ ಸುಕುಮಾರನ್, ಮಕ್ಕಳಾದ ದಿಲ್ಶಾ, ದೇವಾನಂದ, ಸಹೋದರಿಯರಾದ ಲತಾ, ಬಿಂದು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.