ಹಿಂದೂ ಐಕ್ಯವೇದಿ ರಥಯಾತ್ರೆಗೆ ಸ್ವಾಗತ

ಉಪ್ಪಳ: ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇರಳದಲ್ಲಿ ಹಿಂದೂ ವಿರೋಧಿ ಧೋರಣೆಗೆ ಎದುರಾಗಿ ಜಿಲ್ಲೆಯಾದ್ಯಂತ ಹೊರಟ ವಾಹನ ಪ್ರಚಾರ ರಥಯಾತ್ರೆಗೆ ಪ್ರತಾಪನಗರ ಸೋಂಕಾಲ್‌ನಲ್ಲಿ ಸ್ವಾಗತ ನೀಡಲಾಯಿತು. ಜಾಥಾ ನಾಯಕಿ ದಿವ್ಯಾ ಗಟ್ಟಿ, ಶ್ರೀ ಪ್ರೇಮಾನಂದ ಸ್ವಾಮೀಜಿ, ಶಿವಗಿರಿ ಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಜಿ, ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್, ಗೋಪಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು, ವಸಂತ ಕುಮಾರ್ ಮಯ್ಯ ಸ್ವಾಗತಿಸಿ, ವಲ್ಸರಾಜ್ ಕೆ.ಪಿ. ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page