ಹಿಂದೂ ವಿರೋಧಿ ನೀತಿ: ಬದಿಯಡ್ಕ ಪೊಲೀಸ್ ಠಾಣೆಗೆ ವಿ.ಹಿಂ.ಪದಿಂದ ಬೃಹತ್ ಮಾರ್ಚ್

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಲವ್ ಜಿಹಾದ್ ಹೆಸರಲ್ಲಿ ಮತಾಂತರ ನಡೆಯುತ್ತಿದೆ. ಲವ್ ಜಿಹಾದ್ ಕುರಿತಾಗಿ ಖಚಿತ ಮಾಹಿತಿ ಲಭಿಸಿದರೂ ಪೊಲೀಸ್ ಅಧಿಕಾರಿಗಳು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಇಂದು  ಬೆಳಿಗ್ಗೆ ಬೃಹತ್ ಮಾರ್ಚ್ ನಡೆಯಿತು. ಬದಿಯಡ್ಕ ಗಣೇಶ ಮಂದಿರದಿಂದ ಮಾರ್ಚ್ ಆರಂಭಗೊಂಡಿದ್ದು, ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘ ಟನೆಗಳ ಕಾರ್ಯಕರ್ತರು ಭಾಗವ ಹಿಸಿದರು. ನೇತಾರರಾದ ಸಂಕಪ್ಪ ಭಂಡಾರಿ, ಪವಿತ್ರನ್ ಕೆ.ಕೆ.ಪುರಂ, ಹರೀಶ್ ನಾರಂಪಾಡಿ, ಹರೀಶ್ ಪುತ್ರಕಳ, ಸುಧಾಮ ಗೋಸಾಡ, ಶೈಲಜಾ ಭಟ್, ಪಿ.ಆರ್. ಸುನಿಲ್ ಸಹಿತ ಹಲವರು ನೇತೃತ್ವ ನೀಡಿದರು.

RELATED NEWS

You cannot copy contents of this page