ಹೃದಯಾಘಾತ: ಮಧ್ಯವಯಸ್ಕ ನಿಧನ
ಕುಂಬಳೆ: ಕುಂಬಳೆ ಬದ್ರಿಯಾನಗರ ನಿವಾಸಿ ಅಶ್ರಫ್ (50) ಎಂಬವರು ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆಯಲ್ಲಿ ಇವರಿಗೆ ವಾಂತಿ ಸಹಿತ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಈ ಹಿಂದೆ ಗಲ್ಫ್ಉದ್ಯೋಗಿ ಯಾಗಿದ್ದರು. ಅಬೂಬಕರ್-ಆಮಿನ ದಂಪತಿಯ ಪುತ್ರನಾದ ಮೃತರು ಪತ್ನಿ ಸಾಬಿರ, ಮಕ್ಕಳಾದ ಸಮೀರ್, ನಿಸ್ವಾ, ಸಿನಾನ್, ಸಹೋದರ-ಸಹೋದರಿಯ ರಾದ ಅಬ್ದುಲ್ ಖಾದರ್, ಅಬ್ದುಲ್ಲ, ನಸೀಮ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.