ಎನ್‌ಡಿಎ ಚುನಾವಣಾ ಸ್ವಾಗತ ಸಭೆ ಪ್ರಯಾಣ ಆರಂಭ

ಮಧೂರು: ಎನ್‌ಡಿಎ ಚುನಾವಣಾ ಸ್ವಾಗತ ಸಭೆ ಇಂದು  ಬೆಳಿಗ್ಗೆ ಮಧೂರಿನಲ್ಲಿ ನಡೆಯಿತು. ಬಿಜೆಪಿ ರಾಜ್ಯ ಕಾರ್ಯದರ್ಶಿ  ಕೆ. ರಂಜನ್  ಉದ್ಘಾಟಿಸಿದರು.   ನೇತಾರರಾದ ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ಎಂ. ನಾರಾಯಣ ಭಟ್, ಸುರೇಶ್ ಕುಮಾರ್ ಶೆಟ್ಟಿ, ಗಣೇಶ್ ಪಾರೆಕಟ್ಟೆ, ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಸೇರಿದಂತೆ ಹಲವರು   ಮಾತನಾಡಿದರು.   ಬಳಿಕ ವಿವಿಧೆಡೆ ಪರ್ಯಟನೆ ಆರಂಭಗೊಂಡಿದ್ದು, ಸಂಜೆ ೬ ಗಂಟೆಗೆ ಮುಳ್ಳೇರಿಯದಲ್ಲಿ  ಸಮಾಪ್ತಿಹೊಂದಲಿದೆ. ಸಮಾರೋಪ ಸಮಾರಂಭವನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಉದ್ಘಾಟಿಸುವರು.

RELATED NEWS

You cannot copy contents of this page