ಕೆವಿವಿಇಎಸ್ ಮಂಡಲ ಸಮಿತಿ ಸಮಾವೇಶ

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜ್ಯ ಸಮಿತಿ ನಿರ್ಧಾರ ಪ್ರಕಾರ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಂಡಲ ಸಮಾವೇಶ ನಡೆಯಲಿದೆ. ಇದಕ್ಕಾಗಿ ವಿಧಾನಸಭಾ ಸಮಿತಿಯ ರೂಪುರೇಶೆ, ಪ್ರತೀ  ಘಟಕದ ಹೊಣೆಗಾರಿಕೆಯುಳ್ಳ ಜಿಲ್ಲಾ ಪದಾಧಿ ಕಾರಿಗಳು ಹಾಗೂ ರಾಜ್ಯ ಕೌನ್ಸಿಲ್ ಸದಸ್ಯರನ್ನು ಒಳಪಡಿಸಿ ಸಮಿತಿ ರೂಪೀಕರಿಸಲಾಯಿತು.  ಇದರಂತೆ    ತೃಕ್ಕರಿಪುರ ಮಂಡಲ ಸಮಾವೇಶ ಇಂದು ಅಪರಾಹ್ನ 2.30ಕ್ಕೆ ನೀಲೇಶ್ವರ ವ್ಯಾಪಾರ ಭವನದಲ್ಲಿ, ಉದುಮ ಮಂಡಲ ಸಮಾವೇಶ ನಾಳೆ ಬೆಳಿಗ್ಗೆ 10.30ಕ್ಕೆ ಕುತ್ತಿಕ್ಕೋಲ್ ವ್ಯಾಪಾರ ಭವನದಲ್ಲಿ, ಕಾಸರಗೋಡು ಮಂಡಲ ಸಮಾವೇಶ ನಾಳೆ ಅಪರಾಹ್ನ ೩ಕ್ಕೆ ಕಾಸರಗೋಡು ಯೂನಿಟ್ ವ್ಯಾಪಾರ ಭವನದಲ್ಲಿ, ಮಂಜೇಶ್ವರ ಮಂಡಲ ಸಮಾವೇಶ ಸೆ. ೬ರಂದು ಅಪರಾಹ್ನ ೩ಕ್ಕೆ ಮಂಜೇಶ್ವರ ವ್ಯಾಪಾರ ಭವನದಲ್ಲಿ ನಡೆಯಲಿದೆ.

ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಸರಕಾರಗಳು ವ್ಯಾಪಾರಿಗಳನ್ನು ಅವಗಣಿಸುವ ನೀತಿಯನ್ನು ಅನುಸರಿಸುತ್ತಿದೆ. ಅದರ ವಿರುದ್ಧ ಒಗ್ಗಟ್ಟಿನಿಂದ ಪ್ರತಿಭಟಿಸುವುದರ ಜೊತೆಗೆ ಅರ್ಹ ಹಕ್ಕುಗಳನ್ನು ಗಳಿಸುವ ಉದ್ದೇಶದಿಂದ ಮಂಡಲ ಮಟ್ಟದಲ್ಲಿ ಸಮಿತಿ ರೂಪೀಕರಿಸಿ ಸಮಾವೇಶ ಹಮ್ಮಿಕೊಂಡಿರುವುದಾಗಿ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page