ಡಿ.ಡಿ.ಇ ಕಚೇರಿಯಲ್ಲಿ ಸಿಬ್ಬಂದಿಗೆ ಹಾವು ಕಡಿತ

ಮಲಪ್ಪುರಂ: ಮಲಪ್ಪುರಂ ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಸಿಬ್ಬಂದಿಗೆ ಹಾವು ಕಡಿದ ಘಟನೆ ನಡೆದಿದೆ. ಪ್ರಸ್ತುತ ಕಚೇರಿಯ ಅಟೆಂಡರ್ ಮೊಹಮ್ಮದ್ ಜಾಹಾರಿಗೆ ನಿನ್ನೆ ಸಂಜೆ ಸುಮಾರು 5.30ರ ವೇಳೆಗೆ ಕಚೇರಿಯೊಳಗೆ ಹಾವು ಕಡಿದಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಾತ್ರವಲ್ಲ ತಕ್ಷಣ ಹಾವಾಡಿಗನನ್ನು ಕರೆತಂದು ಪ್ರಸ್ತುತ ಕಚೇರಿಯಿಂದಲೇ ಹಾವನ್ನು ಸೆರೆ ಹಿಡಿಯಲಾಯಿತು. ಅದು ವಿಷವಿಲ್ಲದ ಹಾವು ಎಂದು ಬಳಿಕ ಖಚಿತಪಡಿಸಲಾಗಿದೆ.

You cannot copy contents of this page