ಬದಿಯಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಧ್ವಜ ದಿನಾಚರಣೆ

ಬದಿಯಡ್ಕ: ಈ ತಿಂಗಳ 26ರಂದು ಬದಿಯಡ್ಕದಲ್ಲಿ ಜರಗಲಿರುವ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಧ್ವಜ ದಿನಾಚರಣೆ ನಿನ್ನೆ ನಡೆಯಿತು. ಸಮಿತಿ ಅಧ್ಯಕ್ಷ ಜಯರಾಮ ಬಿ. ಧ್ವಜಾರೋಹಣಗೈದರು. ಭಾಸ್ಕರ ಕನಕಪ್ಪಾಡಿ, ದಾಮೋದರ ಚೆಟ್ಟಿಯಾರ್, ಬಿ. ಲಕ್ಷ್ಮಣ ಪ್ರಭು ಕರಿಂಬಿಲ, ರಾಜೇಶ್ ಡಿ.ಕೆ, ಸತೀಶ್ ಆಚಾರ್ಯ, ಗುರುಪ್ರಸಾದ್ ರೈ ಸಹಿತ ಹಲವರು ಉಪಸ್ಥಿತರಿದ್ದರು.

You cannot copy contents of this page