ಬಳ್ಳೂರು ದಾಮೋದರ ಆಚಾರ್ಯ ನಿಧನ


ಬಾಯಾರು: ಬಳ್ಳೂರು ನಿವಾಸಿ ಮರದ ಕೆಲಸಗಾರ ದಾಮೋದರ ಆಚಾರ್ಯ [93] ಇಂದು ಮುಂಜಾನೆ 2.30 ರ ವೇಳೆ ಉಪ್ಪಳÀ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ನಿನ್ನೆ ರಾತ್ರಿ ಅಸೌಖ್ಯ ಉಂ ಟಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ಸಮಿತಿಯ ಹಿರಿಯ ಸದಸ್ಯರಾಗಿದ್ದಾರೆ. ಮೃತರು ಮಕ್ಕಳಾದ ರಾಮಚಂದ್ರ ಆಚಾರ್ಯ, ಹೇಮಾ ವತಿ, ಕೃಷ್ಣ ಆಚಾರ್ಯ, ಯಮುನ, ಗೀತಾ, ಸುಬ್ರಹ್ಮಣ್ಯ ಆಚಾರ್ಯ, ಸೊಸೆಯಂದಿರಾದ ಪ್ರಪುಲ್ಲ, ಹೇಮಾ ವತಿ, ರಜನಿ, ಅಳಿಯಂದಿರಾದ ನಾಗೇಶ ಆಚಾರ್ಯ ಪುತ್ತಿಗೆ, ಮೋಹನ ಆಚಾರ್ಯ ಪುತ್ತೂರು , ಸಹೋದರ ವೆಂಕಟ್ರಮಣ ಆಚಾರ್ಯ, ಸಹೋ ದರಿ ಪಾರ್ವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಭವಾನಿ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page