ಮಂಜೇಶ್ವರ ಠಾಣೆಯಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಯುವಕ ಸೆರೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಅಂಗಿಯನ್ನು ಹಿಡಿದೆಳೆದು ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟುಮಾಡಿದ ದೂರಿನಂತೆ ಮಂಗಲ್ಪಾಡಿ ಬಂದ್ಯೋಡು ಅಡ್ಕ ರಿಪಾಯಿ ಮಂಜಿಲ್‌ನ ಇಬ್ರಾಹಿಂ ಸೈಫ್ ಅಲಿ (೨೨) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸ್ ರುಮೇಶ್ ಸಿ ಎಂಬವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ.  ನಿನ್ನೆ ಸಂಜೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರುಗಾರ ರುಮೇಶ್ (೩೫)ರ ಅಂಗಿಯನ್ನು ಹಿಡಿದು ಅವರನ್ನು ಹೊರಕ್ಕೆ ದೂಡಿ, ಅದನ್ನು ತಡೆಯಲು ಬಂದ ಧನೇಶ್ ಎಂಬ ಪೊಲೀಸ್‌ನ ಮೊಬೈಲ್ ಫೋನ್ ಕೆಳಗೆ ದೂಡಿಹಾಕಿ, ಆ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ ದೂರಿನಂತೆ ಇಬ್ರಾಹಿಂ ಸೈಫ್  ಅಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

You cannot copy contents of this page