ಮದ್ಯಪಾನ ಪ್ರಶ್ನಿಸಿದ ಯುವಕನಿಗೆ ಇರಿತ

ತಿರುವನಂತಪುರ: ವಿವಾಹ ಸತ್ಕಾರ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಯುವಕನಿಗೆ ಇರಿತವುಂಟಾಗಿದೆ. ಕಾಟಾಕಡ ಆರುಮಾನೂರ್ ನಿವಾಸಿ ಅಜೀರ್‌ನಿಗೆ ಬಿಯರ್ ಬಾಟಲಿಯಿಂದ ಇರಿಯಲಾಗಿದೆ. ಗಂಟಲಿಗೆ ಗಂಭೀರ ಗಾಯವಾದ ಅಜೀರ್‌ನನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟಾಕಡ ಸಭಾಂಗಣದಲ್ಲಿ ಘರ್ಷಣೆ ಉಂಟಾಗಿತ್ತು. ಸಭಾಂಗಣದ ಸಮೀಪ ತಂಡವೊಂದು ಮದ್ಯಪಾನಗೈದಿರುವುದನ್ನು ಅಜೀರ್ ಪ್ರಶ್ನಿಸಿರುವುದೇ ಘರ್ಷಣೆಗೆ ಕಾರಣವೆನ್ನಲಾಗಿದೆ. ಕಂಡಲ ನಿವಾಸಿ ಕಿರಣ್ ಕಣ್ಣನ್‌ನ ನೇತೃತ್ವದಲ್ಲಿ ಆಕ್ರಮಿಸಲಾಗಿದೆ ಎಂದು ದೂರಲಾಗಿದೆ.

RELATED NEWS

You cannot copy contents of this page