ವಿವಿಧ ಬೇಡಿಕೆ ಆಗ್ರಹಿಸಿ ಉಪ್ಪಳ ತಾಲೂಕು ಸಪ್ಲೈ ಕಚೇರಿ ಮುಂದೆರೇಶನ್ ವ್ಯಾಪಾರಿಗಳಿಂದ  ಧರಣಿ

ಉಪ್ಪಳ: ರೇಶನ್ ವ್ಯಾಪಾರಿಗಳು ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಿನ್ನೆ ನಡೆಸಿದ ಅಂಗಡಿ ಮುಚ್ಚಿ ಮುಷ್ಕರದಂಗವಾಗಿ  ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ ಮುಂಭಾಗ ನಡೆಸಿದ ಧರಣಿಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದರು. ಶಂಕರ್ ರಾವ್, ಶರಣ್ ಬಂದ್ಯೋ ಡು, ಕಂಚಿಲ ಮೊಹಮ್ಮದ್, ಸೋಮಪ್ಪ, ಪಿ.ಬಿ. ಅಬೂಬಕ್ಕರ್, ಶುಭಾಕರ ಮಾತನಾಡಿದರು.

You cannot copy contents of this page