ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ವಿಷ ಸೇವಿಸಿ ಗಂ ಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿ ಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವಕ ಮೃತಪಟ್ಟರ.

ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಕೇಶವ ಎಂಬವರ ಪುತ್ರ ಅವಿನಾಶ್ (೩೪) ಮೃತಪಟ್ಟ ವ್ಯಕ್ತಿ. ಇವರು  ಈ ತಿಂಗಳ ೯ರಂದು ರಾತ್ರಿ ಹೊಟ್ಟೆ ನೋವೆಂದು ಸಹೋದರನಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಿಂದ ಔಷಧಿ ನೀಡಿದ್ದು, ಅಲ್ಪಹೊತ್ತಿನಲ್ಲಿ ವಾಂತಿ ಮಾಡಿದ್ದರು. ಆದರೆ ಅಸ್ವಸ್ಥತೆ ತೀವ್ರಗೊಂಡಾಗಲೇ ವಿಷ ಸೇವಿಸಿದ ವಿಷಯವನ್ನು ಅವಿನಾಶ್ ತಿಳಿಸಿದ್ದರೆನ್ನಲಾಗಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾದುದರಿಂದ ಮರುದಿನ ಬೆಳಿಗ್ಗೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾಗದೆ ನಿನ್ನೆ ಸಂಜೆ ಮೃತಪಟ್ಟರು. ಈ ತಿಂಗಳ ೭ರಂದು ಅವಿನಾಶ್ ಸಹಿತ ಮನೆಯವರು ಮಂಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ೯ರಂದು ಬೆಳಿಗ್ಗೆ ಅವಿನಾಶ್ ಮನೆಗೆ ಬಂದಿದ್ದರು. ಅನಂತರ ವಿಷ ಸೇವಿ ಸಿರುವುದಾಗಿ ಹೇಳಲಾಗುತ್ತಿದೆ. ಸಂಜೆ ಸಹೋದರ ಮರಳಿದಾಗಲೇ ವಿಷಯ ಅರಿವಿಗೆ ಬಂದಿದೆ.  ಮೃತರು ತಂದೆ, ತಾಯಿ ಕುಸುಮ, ಸಹೋದರ ಶಶಿ ಕುಮಾರ್, ಸಹೋದರಿ ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಹರೀಶ್ ಎಂಬವರು  ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page