ಅಂಗಡಿಗೆ ನುಗ್ಗಿ ಇರಿತ: ಆರೋಪಿ ಸೆರೆ, ನ್ಯಾಯಾಂಗ ಬಂಧನ

ಕಾಸರಗೋಡು: ಮೀಪುಗುರಿ ಯಲ್ಲಿ ಅಂಗಡಿಗೆ ನುಗ್ಗಿ ಯುವಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿ ಲಾಗಿದೆ.ಅಣಂಗೂರು ಜೆ.ಪಿ. ಕಾಲನಿ ನಿವಾಸಿ ಕೆ. ಅಕ್ಷಯ್ (ಮುನ್ನ-31) ಬಂಧಿತ ಆರೋಪಿ. ಮೀಪುಗುರಿಯಲ್ಲಿ ಹೊಸದಾಗಿ ಆರಂಭಿಸುವ ಅಂಗಡಿ ಯ ಪೈಂಟಿಂಗ್ ಕೆಲಸ ನಡೆಸುತ್ತಿದ್ದ ವೇಳೆ ನಿನ್ನೆ ಮುಂಜಾನೆ ಅಲ್ಲಿಗೆ ತೆರಳಿ ಅಂಗಡಿಯಲ್ಲಿದ್ದ ಎರಿಯಾಲ್‌ನ ಬಾಸಿತ್ (25) ಎಂಬಾತನಿಗೆ ಇರಿದು ಗಾಯಗೊ ಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಕ್ಷಯ್‌ನನ್ನು ಬಂಧಿಸ ಲಾಗಿದೆ. ಅಂಗಡಿ ಆರಂಭಿಸುವು ದಕ್ಕಿರುವ ವಿರೋಧವೇ ಇರಿತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಆ ವೇಳೆ ಅಂಗಡಿಯಲ್ಲಿದ್ದ ಎರಿಯಾಲ್ ನಿವಾಸಿ ಮೊಹಮ್ಮದ್ ಅಸೀಫ್ ಸಹೀರ್ (22) ಈ ಬಗ್ಗೆ   ಪೊಲೀ ಸರಿಗೆ ದೂರು ನೀಡಿದ್ದರು. ಡಿವೈಎಸ್ಪಿ  ಸಿ.ಕೆ. ಸುನಿಲ್ ಕುಮಾರ್ ನೀಡಿದ ನಿರ್ದೇಶ ಪ್ರಕಾರ ಪೊಲೀಸರು ನಡೆಸಿದ ತ್ವರಿತ ಕಾರ್ಯಾಚರ ಣೆಯಲ್ಲಿ ಆರೋ ಪಿಯನ್ನು ಬಂಧಿಸಲು ಸಾಧ್ಯವಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page