ಅಗತ್ಯದಷ್ಟು ವೈದ್ಯರು, ಸಿಬ್ಬಂದಿಗಳಿಲ್ಲ: ಜನರಲ್ ಆಸ್ಪತ್ರೆಯಲ್ಲಿ ವಿಳಂಬಗೊಳ್ಳುತ್ತಿರುವ ಮರಣೋತ್ತರ ಪರೀಕ್ಷೆ; ತ್ವರಿತ ಕ್ರಮ ಕೈಗೊಳ್ಳಬೇಕು-ಎಂ.ಎಲ್. ಅಶ್ವಿನಿ
ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವಿಳಂಬಗೊಳ್ಳುವಂತೆ ಮಾಡತೊ ಡಗಿದೆ ಮಾತ್ರವಲ್ಲ ಆಸ್ಪತ್ರೆಯ ಇತರ ನಿರ್ವಹಣೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರತೊಡಗಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ ಬಿಜೆಪಿ ಮುಳಿಯಾರು ಮಂಡಲ ಸಮಿತಿ ಸದಸ್ಯ ಅಚ್ಯುತನ್ ಚಿಪ್ಲಿಕಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ತಂದಾಗ ಅಗತ್ಯದ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದ ಕಾರಣ ಮರಣೋತ್ತರ ಪರೀಕ್ಷೆ ವಿಳಂಬಗೊಳ್ಳುವಂತೆ ಮಾಡಿತು. ಅದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್, ಜಿಲ್ಲಾಧ್ಯಕ್ಷ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್. ಬಾಬುರಾಜ್, ಪಿ.ಆರ್. ಸುನಿಲ್, ಮನುಲಾಲ್ ಮೇಲತ್ತ್, ಮಹೇಶ್ ಗೋಪಾಲ್, ಸುಧಾಮ ಗೋಸಾಡ, ವಿನಯ ಕುಮಾರ್ ರೈ, ಮುಳಿಯಾರು ಪಂ. ಸಮಿತಿ ಅಧ್ಯಕ್ಷ ದಿಲೀಶ್ ಮುಳಿಯಾರು ಸೇರಿದಂತೆ ಹಲವು ನೇತಾರರು ಜನರಲ್ ಆಸ್ಪತ್ರೆಗೆ ಆಗಮಿಸಿ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದರು.
ಜನರಲ್ ಆಸ್ಪತ್ರೆಯಲ್ಲಿ ಅಗತ್ಯ ದಷ್ಟು ವೈದ್ಯರು ಮತ್ತು ಸಿಬ್ಬಂದಿಗಳಿಲ್ಲ ದಿರುವುದು ಮರಣೋತ್ತರ ಪರೀಕ್ಷೆ ಹಾಗೂ ಇತರ ಕೆಲಸಗಳಿಗೆ ಪ್ರತಿಕೂಲವಾಗಿ ಪರಿಣಮಿಸುವು ದರಿಂದ ಶೀಘ್ರ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಇದೇ ಸಂದರ್ಭದಲ್ಲಿ ಆಗ್ರಹಪಟ್ಟಿದ್ದಾರೆ.