ಮುಳ್ಳೇರಿಯ: ಅಡೂರು ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು ಬಳಿಯ ಬೆಳ್ಳಚ್ಚೇರಿ ಗುಳಿಗನಮೂಲೆ ಎಂಬಲ್ಲಿನ ಕಾಡು ಪೊದೆಗಳೆಡೆಯಲ್ಲಿ ನಿನ್ನೆ ಸಂಜೆ 6.30ರ ವೇಳೆ ಮೃತದೇಹ ಕಂಡುಬಂದಿದೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯಂತೆ ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.