ಅಡೂರು ಮೃತದೇಹ ಪತ್ತೆ ಪ್ರಕರಣ: ಡಿಎನ್‌ಎ ತಪಾಸಣೆಗೆ ನಿರ್ಧಾರ

ಮುಳ್ಳೇರಿಯ: ಅಡೂರು ಬೆಳ್ಳಚ್ಚೇರಿ ಗುಳಿಗನಮೂಲೆ ಎಂಬಲ್ಲಿ ಕಾಡಿನಲ್ಲಿ  ಪತ್ತೆಯಾದ ಮೃತದೇಹ ಯಾರದ್ದೆಂದು ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಮೊನ್ನೆ ಸಂಜೆ ವೇಳೆ ಪತ್ತೆಯಾದ  ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿತ್ತು.  ಸಮೀಪದ ಮರದ ರೆಂಬೆಯಲ್ಲಿ ಬಟ್ಟೆ ನೇತಾಡಿಸಿದ ಸ್ಥಿತಿಯಲ್ಲಿ ಕಂಡುಬಂದಿ ದ್ದು, ಈ ಹಿನ್ನೆಲೆಯಲ್ಲಿ  ನೇಣು ಬಿಗಿದು ಸಾವಿಗೀಡಾರಬಹುದೆಂದು ಅಂದಾಜಿಸಲಾಗಿದೆ.

ಮೃತದೇಹ ಯಾರದ್ದೆಂದು ತಿಳಿಯಲು  ಡಿಎನ್‌ಎ ತಪಾಸಣೆ ನಡೆಸಬೇಕಾಗಿ ಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಮೃತದೇಹ ಸ್ಥಳದಿಂದ ನಾಪತ್ತೆಯಾದ  ಪತ್ತನಂತಿಟ್ಟ ನಿವಾಸಿಯಾದ ಟ್ಯಾಪಿಂಗ್ ಕಾರ್ಮಿಕನದ್ದಾಗಿರ ಬಹುದೇ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಆತನ ಸಂಬಂಧಿಕರನ್ನು ಪೊಲೀಸರು ಆದೂರಿಗೆ ಕರೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page