ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು
ಇರಿಟ್ಟಿ: ಸ್ಕೂಟರ್ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟನು. ವಳ್ಳಿತ್ತೋಡ್ ಪುಳಿಂಙೋಟ್ ಹೌಸ್ ಮುಹಮ್ಮದ್ ಕುಟ್ಟಿ- ಸೈನಬ ದಂಪತಿ ಪುತ್ರ ಮುಹಮ್ಮದ್ ಅಫ್ಸಲ್ (19) ಮೃತಪಟ್ಟ ಯುವಕ. ಉಳಿಯಿಲ್ ದಾರುಲ್ ಹಿದಾಯ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಶುಕ್ರವಾರ ಇರಿಟ್ಟಿ- ಮಟ್ಟನ್ನೂರು ರಸ್ತೆಯಲ್ಲಿ ವಳೋರ ಎಂಬಲ್ಲಿ ಅಪಘಾತ ಸಂಭವಿಸಿತ್ತು. ಮಟ್ಟನ್ನೂರು ಭಾಗಕ್ಕೆ ಸ್ಕೂಟರ್ನಲ್ಲಿ ಅಫ್ಸಲ್ ಸಂಚರಿಸುತ್ತಿದ್ದಾಗ ಮುಂಭಾಗದಿಂದ ಬಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅಫ್ಸಲ್ನನ್ನು ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಸಾವು ಸಂಭವಿಸಿದೆ. ಸಹೋದರ ಫವಾಸ್, ಸಹೋದರಿಯರಾದ ಮಿಸ್ರಿಯ, ಆಮಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.