ಅಭಯನಿಕೇತನಕ್ಕೆ ಶಾಲಾ ವಾಹನ ಹಸ್ತಾಂತರ

ಕಾಸರಗೋಡು: ಮಂಗಳೂರು ಕರ್ನಾಟಕ ಬ್ಯಾಂಕ್ ಆಶ್ರಯದಲ್ಲಿ ತಾಳಿಪಡ್ಪು ಸತ್ಯಸಾಯಿ ಅಭಯ ನಿಕೇತನಕ್ಕೆ ಮಂಜೂರುಗೊಳಿಸಿದ ಶಾಲಾ ವಾಹನದ ಕೀಲಿ ಕೈಯನ್ನು ಕರ್ನಾಟಕ ಬ್ಯಾಂಕ್ ಮಂಗಳೂರು ಡಿಜಿಎಂ ವಸಂತ ಆರ್. ಸತ್ಯಸಾಯಿ ಅಭಯನಿಕೇತನದ ಅಧ್ಯಕ್ಷ ಡಾ. ಬಿ.ಎಸ್. ಖಂಡಿಗೆಯವರಿಗೆ ಹಸ್ತಾಂತರಿ ಸಿದರು. ಈ ವೇಳೆ ಕರ್ನಾಟಕ ಬ್ಯಾಂಕ್‌ನ ಕೆ. ಸುಜಿತ್ ಕುಮಾರ್, ಚೈಲ್ಡ್ ವೆಲ್ಫೇರ್ ಸಮಿತಿಯ ಸದಸ್ಯ ನ್ಯಾಯವಾದಿ ಎ. ಶ್ರೀಜಿತ್, ಕಾಸರಗೋಡು ಎಇಒ ಅಗಸ್ಟಿನ್ ಬರ್ನಾಡ್, ಎ. ಹರಿಲಾಲ್ ಮಾತನಾ ಡಿದರು. ಇದೇ ವೇಳೆ ಕ್ಯಾಪ್ಟನ್ ಕೆ.ಎಂ.ಕೆ. ನಂಬ್ಯಾರ್‌ರನ್ನು ಗೌರವಿಸಲಾಯಿತು. ಅಭಯನಿಕೇತನ ಕಾರ್ಯದರ್ಶಿ ಪಿ. ಲತಾ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಬಿ. ಪ್ರೇಮ್‌ಪ್ರಕಾಶ್ ವಂದಿಸಿದರು.

You cannot copy contents of this page