ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಭಾರತವನ್ನು ತಲುಪಿಸಿದ ಆಡಳಿತಾಧಿಕಾರಿ ರಾಜೀವ್ ಗಾಂಧಿ- ಉಣ್ಣಿತ್ತಾನ್
ಕಾಸರಗೋಡು: 21ನೇ ಶತಮಾನ ದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ವಿಜ್ಞಾನ, ತಾಂತ್ರಿಕ ರಂಗದಲ್ಲಿ ಹಾಗೂ ಶಿಕ್ಷಣ ರಂಗದಲ್ಲಿ ನೂತನ ಹಾಗೂ ವಿಶಾಲವಾದ ದೃಷ್ಟಿಕೋನ ದೊಂದಿಗೆ ಭಾರತವನ್ನು ಮುನ್ನಡೆಸಿದ ಆಡಳಿತಾಧಿಕಾರಿಯಾಗಿದ್ದಾರೆ ಮಾಜಿ ಪ್ರಧಾನಮಂತ್ರಿ ದಿ| ರಾಜೀವ್ ಗಾಂಧಿ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಭಿಪ್ರಾಯಪಟ್ಟರು. ಅವರ ತೀಕ್ಷ್ಣವಾದ ದೃಷ್ಟಿಕೋನದ ಪೂರ್ತೀಕರಣದ ಫಲವಾಗಿ ಭಾರತ ದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂ ದಿವೆ. ಕ್ರೀಡಾರಂಗದಲ್ಲಿ ವಿಶ್ವದರ್ಜೆಯ ಮೈದಾನಗಳು ಸೃಷ್ಟಿಯಾಯಿತು ಎಂದು ನುಡಿದರು. ಪ್ರಜಾಪ್ರಭುತ್ವವನ್ನು ಬಲಪಡಿಸುವುದರಂಗವಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದ ಭಾರತದ ಪಂಚಾಯತ್ ರಾಜ್ ನಗರಪಾಲಿಕೆ ಕಾನೂನು ರೂಪಿಸುವ ಚಟುವಟಿಕೆಗೆ ರಾಜೀವ್ ಗಾಂಧಿ ನೇತೃತ್ವ ನೀಡಿದ್ದರೆಂದು ಉಣ್ಣಿತ್ತಾನ್ ಸ್ಮರಿಸಿದರು. ಡಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿಯ 35ನೇ ಹುತಾತ್ಮ ದಿನಾಚರಣೆಯಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಡಾ. ಎ.ಎಂ. ಶ್ರೀಧರನ್ ಸಂಸ್ಮರಣೆ ನಡೆಸಿದರು. ಹಲವರು ಭಾಗವಹಿಸಿದರು.