ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ: ಅಡೂರಿನಲ್ಲಿ ಅಕ್ಷತೆ ಮೆರವಣಿಗೆ

ಅಡೂರು: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿರುವ ಪ್ರತಿಷ್ಠಾ ಮಹೋತ್ಸವದಂಗವಾಗಿ ಅಕ್ಷತೆಕಾಳನ್ನು ಶ್ರೀ ರಾಮನಾಮಜಪ ಮೆರವಣಿಗೆ ಮೂಲಕ ಮಹಾದ್ವಾರಕಟ್ಟೆಯಿಂದ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಲಂಪಾಡಿ ಪಂ. ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ರಾಧಾಕೃಷ್ಣ ಮೇರ್ಟ, ಲಕ್ಷ್ಮಣ ಪೊನಾರಂ, ರಮೇಶ ನೇತೃತ್ವ ವಹಿಸಿದ್ದರು.

RELATED NEWS

You cannot copy contents of this page