ಆರ್ಎಸ್ಎಸ್ ಕಾರ್ಯಕರ್ತನ ಕೊಲೆ ಪ್ರಕರಣ : 8 ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ ಸಜೆ
ಕಣ್ಣೂರು: ಆರ್ಎಸ್ಎಸ್ ಕಾರ್ಯಕರ್ತ ಕಣ್ಣೂರು ಜಿಲ್ಲೆಯ ಮುಳಪ್ಪಿಲಂuಟಿಜeಜಿiಟಿeಜಡ್ ನಿವಾಸಿ ಎಳಂಬಿಲಾಯಿ ಸೂರಜ್ (32)ರನ್ನು ಕೊಲೆಗೈದ ಪ್ರಕರಣದ 8 ಮಂದಿ ಸಿಪಿಎಂ ಕಾರ್ಯಕರ್ತರಿಗೆ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜೀವಾವಧಿ ಸಜೆ ಹಾಗೂ ತಲಾ 50,000 ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕಣ್ಣೂರು ಜಿಲ್ಲೆಯ ಪಾತಕುನ್ನು ಕಾಯಿಂಡಡಿ ವೀಡ್ ನಿವಾಸಿ ಆರ್ಎಂಪಿ ನೇತಾರ ಟಿ.ಪಿ. ಚಂದ್ರಶೇಖರನ್ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿರುವ ಟಿ.ಕೆ. ರಜೀಶ್ (46), ಕಾವುಂಬಾಗA ಕೊಳತ್ತುಪಾರ ಪುದಿಯೋಡತ್ ಹೌಸ್ನ ಎನ್.ವಿ. ಯೋಗೇಶ್ (47), ಎರಿತ್ತೋಳಿ ಅಂuಟಿಜeಜಿiಟಿeಜಟ್ ಪರಂಬಿಲ್ ನಿವಾಸಿ ಕೆ. ಶಂಜಿತ್ (ಜಿತು) (48), ಕೂತುಪರಂಬ್ ನರವೂರಿನ ಪಳೆಯನಿರತ್ ಮಮ್ಮಾಲಿ ಹೌಸ್ನ ಪಿ.ಎ. ಮನೋಜ್ (ನಾರಾಯಣನ್ ಕುಟ್ಟಿ) (44), ಮುಳಪ್ಪಿಲಂuಟಿಜeಜಿiಟಿeಜಡ್ ನೈಯೋತ್ ಸಜೀವನ್ (57), ಮುಳಪ್ಪಿಲಂuಟಿಜeಜಿiಟಿeಜಡ್ ಪಿ.ಪಿ. ಪದ್ಮನಾಭನ್ ಅಲಿಯಾಸ್ ಜೋಯ್ ಪಪ್ಪನ್ (68), ಮುಳಪ್ಪಿಲಂuಟಿಜeಜಿiಟಿeಜಡ್ ಪ್ರಭಾಕರನ್ ಮಾಸ್ಟರ್ (60) ಮತ್ತು ಕರೀರವಳಪ್ಪಿಲ್ ಮನೋಂಬತ್ ರಾಧಾಕೃಷ್ಣನ್ (61) ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಹೊರತಾಗಿ ಈ ಕೊಲೆ ಪ್ರಕರಣದ ಆರೋಪಿಗಳಿಗೆ ತಲೆಮರೆಸಿಕೊಂಡು ಜೀವಿಸಲು ಸಹಾಯ ಮಾಡಿದ 11ನೇ ಆರೋಪಿ ಸೋಪಾನತ್ತಿಲ್ ಪುದಿಯಪುರಯಿಲ್ ಪ್ರದೀಪನ್ (59) ಎಂಬಾತನಿಗೆ ನ್ಯಾಯಾಲಯ ಮೂರು ವರ್ಷ ಸಜೆ ಹಾಗೂ 25,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
2004 ಆಗಸ್ಟ್ 7ರಂದು ಬೆಳಿಗ್ಗೆ