ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನಾಳೆಯಿಂದ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಹಸ್ರತ್ ಬಾವ ಫಖೀರ್ ವಲಿಯುಲ್ಲಾಹಿ ಹಲ್‌ರಮಿ ಮಖಾಂ ಉರೂಸ್ ನಾಳೆಯಿಂದ ೧೮ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನಾಳೆ ಸಂಜೆ ೪ಕ್ಕೆ ಕೆ.ಎಸ್. ಆಟ್ಟಕೋಯ ತಂಙಳ್ ಮಖಾಂ ಸಿಯಾರತ್‌ಗೆ ನೇತೃತ್ವ ನೀಡುವರು. ಇಚ್ಲಂಗೋಡು ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣಗೈಯ್ಯುವರು. ರಾತ್ರಿ ಕೆ.ಎಸ್. ಆಟ್ಟಕೋಯ ತಂಙಳ್ ಉದ್ಘಾಟಿಸುವರು. ಮಜೀದ್ ಬಾಖವಿ ಅಧ್ಯಕ್ಷತೆ ವಹಿಸುವರು. ಕಾರಿಹ ಸಖಾಫಿ ಪೆನ್ನಾಲ ಪ್ರಧಾನ ಭಾಷಣ ಮಾಡುವರು. ಹಲವರು ಮಾತನಾಡುವರು. ಮುಂದಿನ ದಿನಗಳಲ್ಲಿ ನೌಷಾದ್ ಬಾಖವಿ,  ಮುಳ್ಳೂರ್‌ಕರ ಮುಹಮ್ಮದಲಿ ಸಖಾಫಿ, ಇ.ಪಿ. ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರಂ ಧಾರ್ಮಿಕ ಪ್ರವಚನ ನಡೆಸುವರು. ೮ರಂದು ಸಂಜೆ ೩ಕ್ಕೆ ಸ್ವಲಾತ್ ಮಜ್ಲೀಸ್‌ಗೆ ಅಬ್ದುಲ್ ರಹಿಮಾನ್ ಶಹೀನ್ ಅಲ್ ಬುಖಾರಿ ಮಳ್‌ಹರ್ ನೇತೃತ್ವ ನೀಡುವರು. ರಾತ್ರಿ ಮರ್‌ಹೂದ್ ಸಖಾಫಿ ಪ್ರವಚನ ನೀಡುವರು. ೯ರಿಂದ ೧೭ರವರೆಗೆ ವಿವಿಧ ಪಂಡಿತರು ಧಾರ್ಮಿಕ ಪ್ರವಚನ ನೀಡುವರು. ೧೮ರಂದು ಬೆಳಿಗ್ಗೆ ೯ಕ್ಕೆ ಅನ್ನ ಸಂತರ್ಪಣೆಯೊಂದಿಗೆ ಉರೂಸ್ ಸಮಾಪ್ತಿಯಾಗಲಿದೆ ಎಂದು ಈ ಬಗ್ಗೆ ಪದಾಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಖತೀಬ್ ಇರ್ಷಾದ್ ಫೈಸಿ, ಜಮಾಯತ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಟ್ಟಿ ಹಾಜಿ,  ಉಪಾಧ್ಯಕ್ಷ ಮೊಯ್ದು ಹಾಜಿ, ಕೋಶಾಧಿಕಾರಿ ಫಾರೂಖ್ ಪಚ್ಚಂಬಳ, ಮೊಯ್ದೀನ್ ಕುಂಞಿ ಹಮ್ಮದ್ ಹಾಜಿ, ಹಸನ್ ಇಚ್ಲಂಗೋಡ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page