ಇದು ನನ್ನ ಕೊನೆಯ ಸ್ಪರ್ಧೆ-ತರೂರ್
ತಿರುವನಂತಪುರ: ಇದು ನನ್ನ ಕೊನೆಯ ಸ್ಪರ್ಧೆಯಾಗಲಿದೆ. ಇನ್ನು ಮುಂದೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸೆನು ಎಂದು ಕಾಂಗ್ರೆಸ್ನ ಹಿರಿಯ ನಾಯಕ ತಿರುವನಂತಪುರ ಲೋಕಸಭಾ ಕ್ಷೇತ್ರದ ಯುಡಿಎಫ್ ಉಮೇದ್ವಾರ ಶಶಿ ತರೂರ್ ಹೇಳಿದ್ದಾರೆ.
ನ್ಯೂಸ್ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತರೂರ್ ಈ ವಿಷಯ ತಿಳಿಸಿದ್ದಾರೆ. ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ನಾನು ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಮಾತ್ರವಲ್ಲ ಕೇಂದ್ರ ಸಚಿವನಾಗುವ ಭಾಗ್ಯವೂ ನನಗೆ ಲಭಿಸಿದೆ. ಆದ್ದರಿಂದ ಇದು ನನ್ನ ಕೊನೆಯ ಚುನಾವಣೆಯಾ ಗಲಿದೆ. ಮುಂದೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ವೆಂದು ಅವರು ಹೇಳಿದ್ದಾರೆ.