ಇದು ನನ್ನ ಕೊನೆಯ ಸ್ಪರ್ಧೆ-ತರೂರ್

ತಿರುವನಂತಪುರ: ಇದು ನನ್ನ ಕೊನೆಯ ಸ್ಪರ್ಧೆಯಾಗಲಿದೆ. ಇನ್ನು ಮುಂದೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸೆನು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ತಿರುವನಂತಪುರ ಲೋಕಸಭಾ ಕ್ಷೇತ್ರದ ಯುಡಿಎಫ್ ಉಮೇದ್ವಾರ ಶಶಿ ತರೂರ್ ಹೇಳಿದ್ದಾರೆ.

 ನ್ಯೂಸ್ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತರೂರ್ ಈ ವಿಷಯ ತಿಳಿಸಿದ್ದಾರೆ. ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ನಾನು ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಮಾತ್ರವಲ್ಲ ಕೇಂದ್ರ ಸಚಿವನಾಗುವ ಭಾಗ್ಯವೂ ನನಗೆ ಲಭಿಸಿದೆ. ಆದ್ದರಿಂದ ಇದು ನನ್ನ ಕೊನೆಯ ಚುನಾವಣೆಯಾ ಗಲಿದೆ. ಮುಂದೆ ನಾನು ಲೋಕಸಭಾ ಚುನಾವಣೆಗೆ  ಸ್ಪರ್ಧಿಸುವುದಿಲ್ಲ ವೆಂದು ಅವರು ಹೇಳಿದ್ದಾರೆ.

You cannot copy contents of this page