ಉರ್ಮಿ ಕೃಷ್ಣ ಶೆಟ್ಟಿ ಸಂಸ್ಮರಣೆ
ಪೈವಳಿಕೆ: ಸಿಪಿಎಂ ಮುಖಂಡ ಉರ್ಮಿ ಕೃಷ್ಣ ಶೆಟ್ಟಿಯವರ ಸಂಸ್ಮರಣೆ ಸ್ಮೃತಿಮಂಟಪದಲ್ಲಿ ಜರಗಿತು. ಹಿರಿಯ ಮುಖಂಡ ನಾರಾಯಣ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದರು. ಏರಿಯಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ ಉದ್ಘಾಟಿಸಿದರು. ಅಬ್ದುಲ್ಲ ಕೆ, ಸದಾನಂದ ಕೋರಿಕ್ಕಾರ್ ಮಾತನಾಡಿದರು. ಶ್ರೀನಿವಾಸ ಭಂಡಾರಿ ಧ್ವಜಾರೋಹಣ ಗೈದರು. ರವಿ ಶೆಟ್ಟಿ ಕಳಾಯಿ, ಸುಧಾಕರ ಶೆಟ್ಟಿ ಕಳಾಯಿ, ಪಂ. ಅಧ್ಯಕ್ಷೆ ಜಯಂತಿ ಕೆ., ಉರ್ಮಿ ಬ್ರಾಂಚ್ ಕಾರ್ಯದರ್ಶಿ ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಸ್ವಾಗತಿಸಿದರು.