ಊರಾಲುಂಗಲ್ ಸೊಸೈಟಿ ನೌಕರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬಂದ್ಯೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯಾದ ಊರಾಲುಂಗಲ್ ಸೊಸೈಟಿಯ ನೌಕರನೋರ್ವ ವಾಸಸ್ಥಳದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಶ್ಚಿಮಬಂಗಾಲ ನಿವಾಸಿ ಬುತ್ತನ್ ಸಿಂಗ್ (೨೬) ಮೃತಪಟ್ಟ ವ್ಯಕ್ತಿ. ಇವರು ಕಳೆದ ಒಂದು ವರ್ಷದಿಂದ ಬಂದ್ಯೋಡು ಮುಟ್ಟಂನಲ್ಲಿರುವ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ಇವರು ಕೆಲಸಕ್ಕೆ ತಲುಪಿರಲಿಲ್ಲ. ಇದರಿಂದ ಇತರ ಕೆಲಸಗಾರರು ಹುಡುಕಿ ಕ್ವಾರ್ಟರ್ಸ್ಗೆ ತಲುಪಿದಾಗ ಬುತ್ತನ್ ಸಿಂಗ್ ಕ್ವಾರ್ಟರ್ಸ್ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.