ಎಂಡೋಸಲ್ಫಾನ್ ನಿಷ್ಕ್ರಿಯಗೊಳಿಸಲು ಕೇಂದ್ರ ತಂಡ ಜಿಲ್ಲೆಗೆ

ಕಾಸರಗೋಡು: ಕೇರಳ ಪ್ಲಾಂಟೇಶನ್ ಕಾರ್ಪೊರೇಶನ್ ಗೋದಾಮುಗಳಲ್ಲಿ  ತೆಗೆದಿರಿಸಿರುವ ಎಂಡೋಸಲ್ಫಾನ್ ನಿಷ್ಕ್ರಿಯ ಗೊಳಿಸುವ ಬಗ್ಗೆ ಪರಿಶೀಲಿಸಲು ಕೇಂದ್ರ ಮಲಿನೀಕರಣ ನಿಯಂತ್ರಣ ಬೋರ್ಡ್ (ಸಿಪಿಸಿಬಿ) ನೇತೃತ್ವದಲ್ಲಿ ರುವ ತಜ್ಞರ ತಂಡ ಜಿಲ್ಲೆಗೆ ತಲುಪಿದೆ. ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್‌ನ ನಿರ್ದೇಶ ಪ್ರಕಾರ ಈ ತಂಡ ತಲುಪಿದ್ದು, ಇದರಲ್ಲಿ ದಕ್ಷಿಣ ವಲಯ ರೀಜ್ಯನಲ್ ಡೈರೆಕ್ಟರ್ ಡಾ. ಜೆ. ಚಂದ್ರ ಬಾಬು ತಂಡ ಇದ್ದಾರೆ.

ಪೆರಿಯ, ಚೀಮೇನಿ ಗೋದಾಮುಗಳಲ್ಲಿ ತೆಗೆದಿರಿಸಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ನಿನ್ನೆ ತಂಡ ಪರಿಶೀಲಿಸಿದೆ. ಇಲ್ಲಿಂದ ಸ್ಯಾಂಪಲ್ ಸಂಗ್ರಹಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page