ಎಡನೀರು ಸ್ವಾಮೀಜಿ ಚಾತುರ್ಮಾಸ್ಯ: ಸ್ಥಳೀಯ ಭಕ್ತವೃಂದದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ
ಎಡನೀರು: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯಂಗವಾಗಿ ಸ್ಥಳೀಯ ಭಕ್ತವೃಂದದವರು ಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿ ದರು. ಚಾತುರ್ಮಾಸ್ಯದಂಗವಾಗಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದ್ದು, ಭಜನಾ ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ಭಾಗವಹಿಸುತ್ತಿವೆ.
ಡಾ. ಕಿಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರಿಂದ ಶುಕ್ರವಾರ ತಾಳಮದ್ದಳೆ ದಶಾಹ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು, ಸ್ವಾಮೀಜಿ ದೀಪ ಬೆಳಗಿಸಿದರು.