ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ: ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ-ಎಡರಂಗ ಸಂಚಾಲಕ
ತಿರುವನಂತಪುರ: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದಂ ಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬೃಹತ್ ರ್ಯಾಲಿಗಳನ್ನು ನಡೆಸಲಾಗುವು ದೆಂದು ಎಡರಂಗ ರಾಜ್ಯ ಸಂಚಾಲಕ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ.
ರ್ಯಾಲಿಗಳನ್ನು ಯಶಸ್ವಿಗೊಳಿಸಲು ಜಿಲ್ಲಾ ಮಟ್ಟದಲ್ಲಿ ಎಡರಂಗ ಸಭೆಗಳನ್ನು ಕರೆದು ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಸರಕಾರದ ನಾಲ್ಕನೇ ವಾರ್ಷಿಕ ರಾಜ್ಯ ಮಟ್ಟದ ಉದ್ಘಾಟನೆ ಎಪ್ರಿಲ್ 21ರಂದು ಕಾಸರಗೋಡಿನಲ್ಲಿ ನಡೆಯಲಿದೆ. ಅಂದು ಕಾಸರಗೋಡಿನಲ್ಲಿ ಎಡ ರಂಗದಿಂದ ಬೃಹತ್ ರ್ಯಾಲಿಯೂ ನಡೆಯಲಿದೆ. ನಂತರದ ವಿವಿಧ ದಿನಗಳಲ್ಲಾಗಿ ರಾಜ್ಯದ ಇತರ ಎಲ್ಲಾ ಜಿಲ್ಲೆಗಳಲ್ಲೂ ರ್ಯಾಲಿ ನಡೆಸಲಾಗು ವುದು. ವಾರ್ಷಿಕ ಕಾರ್ಯಕ್ರಮ ಮೇ 23ರಂದು ತಿರುವ ನಂತಪುರದಲ್ಲಿ ಸಮಾಪ್ತಿ ಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮ ಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರುಗಳು ಭಾಗವಹಿಸು ವರೆಂದು ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಗೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಎಡರಂಗ ಗೆದ್ದು ಸತತ ಮೂರನೇ ಬಾರಿ ಅಧಿಕಾರಕ್ಕೇ ರುವ ತುಂಬು ನಿರೀಕ್ಷೆಯನ್ನು ನಾವು ಹೊಂದಿ ದ್ದೇವೆ. ಅದಕ್ಕಿರುವ ಅಗತ್ಯದ ಕಾರ್ಯಯೋಜನೆಗಳಲ್ಲಿ ಎಡರಂಗ ಈಗಾಗಲೇ ತೊಡಗಿದೆ ಎಂದು ಅವರು ಹೇಳಿದ್ದಾರೆ.