ಎನ್.ಡಿ.ಎ ಅಭ್ಯರ್ಥಿ ವಿ. ಮುರಳೀಧರನ್‌ರ ಪ್ರಚಾರ ವಾಹನ ವ್ಯೂಹದ ಮೇಲೆ ತಂಡ ಆಕ್ರಮಣ ಯತ್ನ

ಆಟಿಂಗಾಲ್: ಎನ್.ಡಿ.ಎ ಅಭ್ಯರ್ಥಿಯೂ ಕೇಂದ್ರ ಸಚಿವರಾದ ವಿ. ಮುರಳೀಧರನ್‌ರ ಚುನಾವಣಾ ಪ್ರಚಾರ ವೇಳೆ ವಾಹನ ವ್ಯೂಹದ ಮೇಲೆ ದುಷರ್ಮಿಗಳ ತಂಡವೊಂದು ಆಕ್ರಮಣಕ್ಕೆ ಯತ್ನಿಸಿದೆ.

ಪಳ್ಳಿಕಾಲ್ ಗ್ರಾಮ ಪಂಚಾ ಯತ್‌ನ ಪಕಲ್‌ಕುರಿ ಕೊಟ್ಟಿಯಂ ಮುಕ್ಕ್ ಎಂಬಲ್ಲಿ ನಿನ್ನೆ ರಾತ್ರಿ ೭.೪೫ರ ವೇಳೆ ಘಟನೆ ನಡೆದಿದೆ.  ಬೈಕ್‌ನಲ್ಲಿ ತಲುಪಿದ ಮೂರು ಮಂದಿ ವಾಹನವ್ಯೂಹದ ಮೇಲೆ ನುಗ್ಗಿ ವಿ. ಮುರಳೀಧರನ್ ಹಾಗೂ ಅವರ ಜೊತೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಮಹಿಳೆಯರ ಸಹಿತ ಬಿಜೆಪಿ ಕಾರ್ಯಕರ್ತರನ್ನು ಅಸಭ್ಯ ವಾಗಿ ನಿಂದಿಸಿ ಆಕ್ರಮಣಕ್ಕೆ ಮುಂದಾಗಿರು ವುದಾಗಿ ದೂರಲಾಗಿದೆ. ಈ ಹಿನ್ನೆಲೆ ಯಲ್ಲಿ ಪರ್ಯಟನೆ ಮೊಟಕುಗೊಳಿಸಿದ ಮುರಳೀಧರನ್ ಪಳ್ಳಿಕ್ಕಾಲ್ ಪೊಲೀಸರಿಗೆ ಮಾಹಿತಿ ನೀಡಿದರು. ದುಷ್ಕರ್ಮಿಗಳ ತಂಡ ನಡೆಸಿದ ಆಕ್ರಮಣಯತ್ನ  ದೃಶ್ಯಗಳನ್ನು ಎನ್‌ಡಿಎ ಕಾರ್ಯಕರ್ತರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸಿಪಿಎಂ ಕಾರ್ಯಕರ್ತರು ಆಕ್ರಮಣ ಯತ್ನ ನಡೆಸಿದ್ದಾರೆಂದು ಬಿಜೆಪಿ ಆರೋಪಿಸಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಪಳ್ಳಿಕಾಲ್‌ನಲ್ಲಿ ಎನ್‌ಡಿಎ ಅಭ್ಯರ್ಥಿ ಶೋಭಾ ಸುರೇಂದ್ರನ್ ಮೇಲೂ ದುಷ್ಕರ್ಮಿಗಳು ಆಕ್ರಮಣಕ್ಕೆ ಯತ್ನಿಸಿದ್ದರು. ಅದೇ ಪಂಚಾಯತ್‌ನ ಪಕ್ಕಲ್‌ಕುರಿ ಕೊಟ್ಟಿಯಂಮುಖ್‌ನಲ್ಲಿ ನಿನ್ನೆ ಎನ್‌ಡಿಎ ಅಭ್ಯರ್ಥಿಯ ಪ್ರಚಾರ ವಾಹನದ ಮೇಲೆ ದುಷರ್ಮಿಗಳು ಆಕ್ರಮಿ ಸಲು ಯತ್ನಿಸಿದ್ದಾರೆಂದು ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page