ಕಣ್ಣೂರು ಎಡಿಎಂ ಸಾವು: ಕುಟುಂಬದ ಹೇಳಿಕೆ ದಾಖಲು ಇಂದು

ಕಣ್ಣೂರು: ಕಣ್ಣೂರು ಎಡಿಎಂ ನವೀನ್‌ಬಾಬು ಅವರು ಆತ್ಮಹತ್ಯೆಗೈದ  ಘಟನೆಗೆ ಸಂಬಂಧಿಸಿ ಪ್ರತ್ಯೇಕ ತನಿಖಾ ತಂಡ ಇಂದು ಕುಟುಂಬ ಸದಸ್ಯರಿಂದ ಹೇಳಿಕೆ ದಾಖಲಿಸಿಕೊಳ್ಳಲಿದೆ. ಪ್ರತ್ಯೇಕ ತನಿಖಾ ತಂಡವನ್ನು ನೇಮಿಸಿದ್ದರೂ ನವೀನ್‌ಬಾಬು ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಕುಟುಂಬ ಆರೋಪಿಸಿತ್ತು. ಕಣ್ಣೂರು ಜಿಲ್ಲಾ ಪಂ.ಮಾಜಿ ಅಧ್ಯಕ್ಷೆ ಪಿ.ಪಿ. ದಿವ್ಯಾ ಹೊರಿಸಿದ ಲಂಚ ಆರೋಪದ ಹಿಂದಿನ ಗೂಢಾಲೋಚನೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ನವೀನ್‌ಬಾಬು ಅವರ ಕುಟುಂಬ ಆಗ್ರಹಿಸಿದೆ.

You cannot copy contents of this page