ಕಣ್ವತೀರ್ಥ, ಹನುಮಾನ್ನಗರ ಸಹಿತ ವಿವಿಧೆಡೆ ವ್ಯಾಪಕ ಕಡಲ್ಕೊರೆತ: ರಸ್ತೆ ನೀರು ಪಾಲು ಭೀತಿ
ಉಪ್ಪಳ: ಮಂಜೇಶ್ವರ ಹಾಗೂ ಉಪ್ಪಳದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ಕಣ್ವತೀರ್ಥ ಹಾಗೂ ಪರಿಸರ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಡಲ್ಕೊರೆತ ಮುಂದುವರಿಯುತ್ತಿದ್ದು, ಕಣ್ವತೀರ್ಥ ಪ್ರದೇಶದಲ್ಲಿ ಈಗಾಗಲೇ ಹಲವಾರು ಗಾಳಿ, ತೆಂಗಿನ ಮರಗಳು, ಜಸಿಂತ ಎಂಬವರ ಮನೆಯ ಆವರಣಗೋಡೆ ಸಮುದ್ರ ಪಾಲಾಗಿದೆ. ಕುಟುಂಬ ಸ್ಥಳಾಂತರಗೊAಡಿದೆ.
ಅಲ್ಲದೆ ಪರಿಸರದ ರಸ್ತೆ ಹಾಗೂ ಖಾಸಗಿ ಗೆಸ್ಟ್ ಹೌಸ್, ಇತರ ಮನೆಗಳೂ ಅಪಾಯದಂಚಿನಲ್ಲಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ, ಮಣಿಮುಂಡ, ಶಾರದಾ ನಗರ, ಮೂಸೋಡಿಯಲ್ಲಿಯೂ ಕಡಲ್ಕೊರೆತ ವ್ಯಾಪಕಗೊಂಡಿದೆ. ಸಮುದ್ರ ತೀರದಲ್ಲಿರುವ ಹಲವು ಮನೆಗಳು ಅಪಾಯದಂಚಿನಲ್ಲಿದೆ. ಉಪ್ಪಳದ ಹನುಮಾನ್ ನಗರದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗೆ ಅಲೆಗಳು ಬಡಿದು ಕಗ್ಗಲ್ಲಿನ ತಡೆಗೋಡೆ ಕುಸಿದಿದೆ. ಕಡಲ್ಕೊರೆತ ಮುಂದುವರಿದಲ್ಲಿ ರಸ್ತೆ ಸಮುದ್ರ ಪಾಲಾಗಿ ಸ್ಥಳೀಯ ನೂರಾರು ಮೀನು ಕಾರ್ಮಿಕರ ಸಂಚಾರ ಮೊಟಕುಗೊಳ್ಳಲಿದೆ. ಕಣ್ವತೀರ್ಥ ಪ್ರದೇಶಕ್ಕೆ ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ , ಪಂಚಾಯತ್ ಸದಸ್ಯರಾದ ವಿನಯ ಭಾಸ್ಕರ, ಲಕ್ಷ÷್ಮಣ ಕುಚ್ಚಿಕ್ಕಾಡ್, ಯಾದವ ಬಡಾಜೆ ಸಹಿತ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.