ಕನ್ಯಪ್ಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು
ಬದಿಯಡ್ಕ: ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ ಯುವಕ ಅಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕನ್ಯಪ್ಪಾಡಿ ನಿವಾಸಿ ಬಿ.ಎಂ. ಶುಕೂರ್ ಎಂಬವರ ಪುತ್ರ ಮುಹಮ್ಮದ್ ಉನೈಸ್ (19) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಬೆಂಗಳೂರಿನ ವೈಟ್ ಫೀಲ್ಡ್ ಆಡುಗೋಡಿಯಲ್ಲಿರುವ ಲಾಡ್ಜ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತರು ತಂದೆ, ತಾಯ ಸಫಿಯ, ಸಹೋದರಿಯ ರಾದ ಶಮ್ನ, ಶಾಹಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.