ಕರಂದಕ್ಕಾಡಿನಲ್ಲಿ ಅಬಕಾರಿ ದಾಳಿ : 240 ಪ್ಯಾಕೆಟ್ ಕರ್ನಾಟಕ ಮದ್ಯ ವಶ

ಕಾಸರಗೋಡು: ನಗರದ ಕರಂದ ಕ್ಕಾಡಿನ ಶೇಂದಿ ಅಂಗಡಿ ಎದುರುಗಡೆ ಇರುವ ಜನವಾಸವಿಲ್ಲದ ಹಿತ್ತಿಲಿಗೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸಿಕೆವಿ ಸುರೇಶ್ (ಗ್ರೇಡ್)ರ ನೇತೃತ್ವ ಅಬಕಾರಿ ತಂಡ  ನಡೆಸಿದ  ದಾಳಿಯಲ್ಲಿ 180 ಎಂಎಲ್‌ನ 240 ಟೆಟ್ರಾ ಪ್ಯಾಕೆಟ್ (43.2 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಕಪ್ಪು ಪ್ಲಾಸ್ಟಿಕ್ ಕವರುಗಳಲ್ಲಿ ಈ ಮದ್ಯ  ಪ್ಯಾಕೆಟ್‌ಗಳನ್ನು ತುಂಬಿಸಿ ಹಿತ್ತಿಲ ಪೊದೆಯಲ್ಲಿ ಬಚ್ಚಿಡಲಾಗಿತ್ತೆಂದೂ ಇದಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಲ್ಲಿ ಯಾರನ್ನೂ ಆರೋಪಿಯಾಗಿ ಸೇರ್ಪಡೆಗೊಳಿಸಲಾಗಿಲ್ಲವೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿದ ಮಾಲಗಳನ್ನು ನಂತರ ಕಾಸರಗೋಡು ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂತರಿಸ ಲಾಯಿತು. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ವಿ ಮತ್ತು ಕೆ. ಸೋನು ಸೆಬಾಸ್ಟಿನ್ ಎಂಬಿವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page