ಕಲ್ಲಿಕೋಟೆ ಬಳಿ ಬಸ್ ಅಪಘಾತ ಓರ್ವ ಪ್ರಯಾಣಿಕ ಮೃತ್ಯು

ಕಲ್ಲಿಕೋಟೆ: ತಿರುವನಂತಪುರ ದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಕಂದಕಕ್ಕೆ ಮಗುಚಿ ಬಿದ್ದು ಓರ್ವ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ.

ಇಂದು ಮುಂಜಾನೆ  ಮೂರು ಗಂಟೆ ವೇಳೆ ಕಲ್ಲಿಕೋಟೆ ಬಳಿಯ ಮಣ್ಣೂರು ಎಂಬಲ್ಲಿ   ಅಪಘಾತ  ಉಂಟಾಗಿದೆ. ಕೊಲ್ಲಂ ಆಲಂಗೋಡು  ನಿವಾಸಿ ಅಮಲ್ ಎಂಬವರು  ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮಂಗಳೂರಿನ ಸಂಸ್ಥೆಯೊಂದರ ನೌಕರನಾಗಿದ್ದರು.  

ಅಪಘಾತದಲ್ಲಿ 22 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನನ್ನು  ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಇತರರನ್ನು  ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಡುಗಡೆಗೊಳಿಸಲಾಗಿದೆ. ಅಪಘಾತ ತಕ್ಷಣ ತಲುಪಿದ ಪೊಲೀಸರು ಹಾಗೂ ಅಗ್ನಿಶಾಮಕದಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page