ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ದೀಪಕ್ ನಿಧನ

ಪೆರ್ಲ: ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ದೀಪಕ್ ಭಂಡಾರದ ಮನೆ (೫೭) ನಿಧನಹೊಂದಿ ದರು. ನಿನ್ನೆ ಹೃದಯಾಘಾತ ಉಂಟಾಗಿ ನಿಧನ ಸಂಭವಿಸಿದೆ. ಎಣ್ಮಕಜೆ ಮಂಡಲ ಕಾಂಗ್ರೆಸ್ ಕಾರ್ಯದರ್ಶಿ, ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಯಾಗಿದ್ದರು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಸದಸ್ಯರಾಗಿದ್ದರು.

ಮೃತರು ತಾಯಿ ಗೌರಿ, ಪತ್ನಿ ರವಿಕಲಾ, ಮಕ್ಕಳಾದ ಶ್ರೇಯಸ್, ಸಮರ್ಥ್, ಸಹೋದರ ಪ್ರಕಾಶ್, ಸಹೋದರಿ ಚಂದ್ರಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ.  ಇವರ ತಂದೆ ಬಾಬು ಬಂ ಗೇರ ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page