ಕಾಡಾನೆ ಉಪಟಳ: ಅದಿರಪಳ್ಳಿಯಲ್ಲಿ ಹರತಾಳ

ತೃಶೂರು: ಅದಿರಪಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳಕ್ಕೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಜನಪರ ಸಮಿತಿ ಕರೆ ನೀಡಿದ ಹರತಾಳ ಆರಂಭಗೊಂಡಿತು. ಎರಡು ದಿನದೊಳಗೆ ಕಾಡುತ್ಪನ್ನಗಳನ್ನು ಸಂಗ್ರಹಿಸಲು ತೆರಳಿದ ಬುಡಕಟ್ಟು ವಿಭಾಗಕ್ಕೊಳಪಟ್ಟ ಮೂರು ಮಂದಿ ಕಾಡಾನೆಗಳ ಆಕ್ರಮಣದಲ್ಲಿ ಕೊಲೆಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿದೆ. ಸಂಜೆ ೬ ಗಂಟೆ ವರೆಗೆ ಹರತಾಳ ಮುಂದುವರಿಯಲಿದೆ. ಆದಿತ್ಯವಾರ ಸೆಬಾಸ್ಟಿಯನ್ (20), ಸೋಮವಾರ ರಾತ್ರಿ ಸತೀಶ್ (34), ಅಂಬಿಕಾ (30) ಎಂಬಿವರು ಕಾಡಾನೆ ದಾಳಿಗೆ ಅಸುನೀಗಿದ್ದರು.

Leave a Reply

Your email address will not be published. Required fields are marked *

You cannot copy content of this page