ಕಾರಿನಲ್ಲಿ ಸಾಗಿಸುತ್ತಿದ್ದ 50 ಲಕ್ಷ ರೂ. ಕಾಳಧನ ಪತ್ತೆ

ಕಾಸರಗೋಡು: ಸರಿಯಾದ ದಾಖಲು ಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 50ಲಕ್ಷ ರೂ.ವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಚೆಂಗಳ ಎದಿರ್‌ತೋಡು ನಿವಾಸಿ ಮೊದೀನ್ ಎಂಬಾತನಿಂದ ಈ ಮಾಲು ವಶಪಡಿಸಲಾಗಿದೆ. ಹೊಸದುರ್ಗ ಕುಶಾಲನಗರದಲ್ಲಿ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ಅಜಾದ್‌ರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಕಾಳಧನ ಸಾಗಿಸುವ ಬಗ್ಗೆ ಹೊಸದುರ್ಗ ಡಿವೈಎಸ್‌ಪಿ ವಿ. ಲತೀಷ್‌ರಿಗೆ ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಅವರು ನೀಡಿ ನಿರ್ದೇಶ ಪ್ರಕಾರ ಪೊಲೀಸರು ಕುಶಾಲನಗರದ ವಾಹನ ತಪಾಸಣೆಯಲ್ಲಿ ತೊಡಗಿದ್ದ   ವೇಳೆ ಆ ದಾರಿಯಾಗಿ  ಮೊದೀನ್ ಚಲಾಯಿಸಿಕೊಂಡು ಬಂದಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ಗೊಳಪಡಿಸಿದಾಗ ಅದರ  ಒಳಗಡೆ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಸೆರೆಯೊಳಗೆ ಕಾಳಧನ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಆ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮೊದೀನ್‌ನನ್ನು ವಿಚಾರಣೆಗೊಳಪಡಿಸಿ, ಆತನ ಹೇಳಿಕೆಯನ್ನು ದಾಖಲಿಸಲಾಗಿದೆ. ವಶಪಡಿಸಲಾದ ಹಣವನ್ನು ನಂತರ ಪೊಲೀಸರು ಹೊಸದುರ್ಗ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈ ಕುರಿತಾದ ವರದಿಯನ್ನು ಎನ್‌ಫೋರ್ಸ್‌ಮೆಂಟ್ ನಿರ್ದೇಶ ನಾಲಯಕ್ಕೂ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page