ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ: ಸೂಕ್ತ ಕ್ರಮ ಕೈಗೊಳ್ಳಬೇಕು-ಬಿಜೆಪಿ ಒತ್ತಾಯ

ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಕಾವುಗೋಳಿ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಇದರ  ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.

200ರಷ್ಟು ಮೀನು ಕಾರ್ಮಿಕರ ಕುಟುಂಬಗಳು ವಾಸಿಸುವ ಈ ಪ್ರದೇಶದ ಜನರಿಗೆ ಮುಖ್ಯ ರಸ್ತೆಗೆ ತಲುಪಲು ಸರಿಯಾದ ದಾರಿಯಿಲ್ಲ. ಯಾರಿಗಾ ದರೂ ಆರೋಗ್ಯ ಸಮಸ್ಯೆಉಂಟಾದಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ಚೇರಂಗೈ ರಸ್ತೆಯನ್ನು ಆಶ್ರಯಿಸಬೇಕಾ ಗುತ್ತಿದೆ. ಆದರೆ ಕಡಲ್ಕೊರೆತದಿಂದ ಈ ಏಕೈಕ ರಸ್ತೆಯೂ ಬೆದರಿಕೆ ಎದುರಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದ ಜನತೆ ಎದುರಿಸುವ ಈ ಸಮಸ್ಯೆಗೆ ಇದುವರೆಗೆ ಪರಿಹಾರ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರೂ ಅವರ‍್ಯಾರೂ ಗಮನ ಹರಿಸುತ್ತಿಲ್ಲ. ಇದರ ವಿರುದ್ದ ತೀವ್ರ ಚಳವಳಿ ನಡೆಸಬೇಕಾಗಿ ಬರಲಿದೆಯೆಂದು ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ಅಧ್ಯಕ್ಷ ಸಂಪತ್ತ್, ಪಂಚಾಯತ್ ಸದಸ್ಯೆ ಮಲ್ಲಿಕಾ ಪ್ರಭಾಕರ್ ತಿಳಿಸಿದ್ದಾರೆ.

You cannot copy contents of this page