ಕಾಸರಗೋಡಿಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ
ಕಾಸರಗೋಡು: ಸಪ್ತ ಭಾಷಾ ಸಂಗಮ ಭೂಮಿ ಯಾದ ಕಾಸರಗೋ ಡು ಜಿಲ್ಲೆ ಇಂದು ತನ್ನ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.
ವಿಭಿನ್ನ ಭಾಷೆಗಳು, ಆಚಾರಗಳು ಮತ್ತು ತನ್ನದೇ ಆದ ಪ್ರಾಚೀನ ಸಂಸ್ಕೃತಿಯನ್ನು ಮೈಗೂಡಿಸಿಕೊಂ ಡಿರುವ ಪ್ರದೇಶವಾಗಿದೆ ಕಾಸರ ಗೋಡು. ರಾಜ್ಯದಲ್ಲಿ ಅತೀ ಹೆಚ್ಚು ನದಿಗಳಿರುವ ಹಾಗೂ ಪ್ರಕೃತಿ ರಮಣೀಯವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿ ರುವ ಜಿಲ್ಲೆಯೂ ಆಗಿದೆ.
ಬೇಕಲಕೋಟೆ, ರಾಣಿಪುರ, ಪೊಸಡಿಗುಂಪೆ ಇತ್ಯಾದಿ ಪ್ರವಾಸಿ ತಾಣಗಳಿಂದ ರಾಜ್ಯ ಖಜಾನೆಗೆ ಭಾರೀ ಆದಾಯ ಉಂಟಾಗುತ್ತಿದೆ.
1984 ಮೇ 24ರಂದು ಕಾಸರ ಗೋಡಿಗೆ ರೂಪು ನೀಡಲಾಗಿತ್ತು. ಅದರ ಮೊದಲು ಕಣ್ಣೂರು ಜಿಲ್ಲೆಯಲ್ಲಿ ಒಳಗೊಂಡಿತ್ತು. ಜಿಲ್ಲೆಯಲ್ಲಿ ಕಾಸರ ಗೋಡು, ಮಂಜೇಶ್ವರ, ಹೊಸದುರ್ಗ ಮತ್ತು ವೆಳ್ಳರಿಕುಂಡು ಎಂಬೀ ನಾಲ್ಕು ತಾಲೂಕುಗಳು ಒಳಗೊಂಡಿವೆ.
ಇತರ ಜಿಲ್ಲೆಗಳೊಂದಿಗೆ ಹೋಲಿಸಿದಾಗ ಕಾಸರಗೋಡು ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಅವಗಣಿಸ ಲ್ಪಡುತ್ತಿರುವ ಜಿಲ್ಲೆಯಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಇಲ್ಲಿನ ಜನರು ನಿರಂತರವಾಗಿ ಮುಂದಿರಿಸುತ್ತಿರುವ ಬೇಡಿಕೆಗಳೆಲ್ಲಾ ಅರಣ್ಯರೋಧನವಾಗಿ ಪರಿಣಮಿಸಿದೆ. ಕನ್ನಡ ಭಾಷಾ ಅಲ್ಪಸಂಖ್ಯಾತರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಇದರ ಹೊರತಾಗಿ ಶಾಲೆಗಳಲ್ಲಿ ಮಲೆಯಾಳ ಭಾಷೆಯನ್ನು ಕಡ್ಡಾಯವಾಗಿ ಕಲಿಸುವಂತೆ ಮಾಡುವ ಪ್ರಯತ್ನಗಳು ಇನ್ನೊಂದೆಡೆ ನಡೆಯುತ್ತಿದೆ. ಒಟ್ಟಾರೆಯಾಗಿ ಕಾಸರಗೋಡು ಜಿಲ್ಲೆ ಇಂದು ತನ್ನ ೪೧ನೇ ಹುಟ್ಟುಹಬ್ಬ ಆಚರಿಸುತ್ತಿದ್ದರೂ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಹಿಂದಕ್ಕೆ ಸಾಗುತ್ತಿದೆ.