ಕಾಸರಗೋಡು ನಗರದ ಬುರ್ಖಾ ಅಂಗಡಿಯಲ್ಲಿ ಭಾರೀ ಅಗ್ನಿಬಾಧೆ: ಲಕ್ಷಾಂತರ ರೂ.ಗಳ ನಷ್ಟ
ಕಾಸರಗೋಡು: ಕಾಸರಗೋಡು ನಗರದ ಬುರ್ಖಾ ಅಂಗಡಿಯಲ್ಲಿ ಇಂದು ಮುಂಜಾನೆ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ.
ನಗರದ ಹಳೆ ಬಸ್ ನಿಲ್ದಾಣ ಪರಿಸರದ ಸ್ಟೇಟ್ ಹೋಟೆಲ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಚೆರ್ಕಳ ನಿವಾಸಿ ನಿಝಾರ್ ಎಂಬವರ ಇಸ್ವಾ ಪರ್ಧಾ ಎಂಬ ಅಂಗಡಿಗೆ ಇಂದು ಮುಂಜಾನೆ ಸುಮಾರು 8.30ರ ವೇಳೆ ಬೆಂಕಿ ತಗಲಿಕೊಂಡಿದೆ. ಆ ಬಗ್ಗೆ ಲಭಿಸಿದ ದೂರಿನಂತೆ ಸ್ಟೇಷನ್ ಆಫೀಸರ್ ಹರ್ಷರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ತಾಸುಗಳ ತನಕ ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಸಫಲರಾದರು. ಆ ಮೂಲಕ ಬೆಂಕಿ ಆ ಕಟ್ಟಡದ ಇತರ ಸಂಸ್ಥೆಗಳಿಗೆ ತಗಲುವುದನ್ನು ತಪ್ಪಿಸಿದರು.
ಬೆಂಕಿ ನಂದಿಸುವ ಕಾರ್ಯಾಚರ ಣೆಯಲ್ಲಿ ಕಾಸರಗೋಡು ಮಾತ್ರವಲ್ಲ ಉಪ್ಪಳ ಮತ್ತು ಕುತ್ತಿಕ್ಕೋಲು ಅಗ್ನಿಶಾಮಕದಳ ಆಗಮಿಸಿ ಸಹಕರಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿಕೊಂ ಡಿರಬಹುದೆಂದು ಶಂಕಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ ಅಗ್ನಿಶಾಕಮದಳದ ತಂಡದಲ್ಲಿ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು, ಫಯರ್ಮೆನ್ ಗಳಾದ ಜೀವನ್, ಅಮಲ್ರಾಜ್, ಅಶೋಕನ್, ನಿತಿನ್ಕೃಷ್ಣನ್, ಶೈಜು, ಗೋಪ ಕುಮಾರ್, ಪ್ರದೀಶ್, ಹೋಂ ಗಾರ್ಡ್ ರಜೀಶ್ ಮೊದಲಾದವರು ಒಳಗೊಂಡಿದ್ದರು. ಈ ಅಗ್ನಿ ಅನಾಹುತದಲ್ಲಿ ೨೫ ಲಕ್ಷ ರೂ.ಗಿಂತಲೂ ಹೆಚ್ಚು ನಷ್ಟ ಅಂದಾ ಜಿಸಲಾಗಿದೆ.