ಕಿಚ್ಚಿರಿಸಿ ತಾಯಿ, ಮಕ್ಕಳು ಮೃತಪಟ್ಟ ಘಟನೆ: ಸಾವಿಗೆ ಕಾರಣ ಕುಟುಂಬ ಕಲಹ

ಕೊಲ್ಲಂ: ಕರುನಾಗಪಳ್ಳಿಯಲ್ಲಿ ಕಿಚ್ಚಿರಿಸಿ ಆತ್ಮಹತ್ಯೆಗೆತ್ನಿಸಿದ ತಾಯಿ ಹಾಗೂ ಮಕ್ಕಳು ಮೃತಪಟ್ಟರು. ಕರುನಾಗಪಳ್ಳಿ ನಿವಾಸಿ ತಾರಾ ಜಿ. ಕೃಷ್ಣ (36), ಮಕ್ಕಳಾದ ಅನಾಮಿಕ (7), ಆತ್ಮಿಕ (ಒಂದೂವರೆ) ಎಂಬಿವರು ಮೃತಪಟ್ಟವರು. ಪತಿಗೃಹದಲ್ಲಿ ಉಂಟಾಗಿರುವ ಕುಟುಂಬ ಸಮಸ್ಯೆ ಆತ್ಮಹತ್ಯಾಯತ್ನಕ್ಕೆ ಕಾರಣವೆಂದು ಪ್ರಾಥಮಿಕವಾಗಿ ತಿಳಿಯಲಾಗಿದೆ. ಅನಿವಾಸಿಯಾಗಿರುವ ಪತಿ ವಿದೇಶದಿಂದ ಹಿಂತಿರುಗಲಿರುವ ಮಧ್ಯೆ ತಾರಾ ಮಕ್ಕಳ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ.  ಮಕ್ಕಳಿಗೆ ಕಿಚ್ಚಿರಿಸಿದ ಬಳಿಕ ತಾನೂ ಕೂಡಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ತಾರಾ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ. ಆ ಬಳಿಕ ಇವರ ಇಬ್ಬರು ಮಕ್ಕಳು ಕೂಡಾ ಮೃತಪಟ್ಟಿ ರುವುದಾಗಿ ವರದಿಯಾಗಿದೆ. ಈ ಮೂರು ಮಂದಿಯ ಮೃತದೇಹಗಳನ್ನು ವಂಡಾನಂ ಮೆಡಿಕಲ್ ಕಾಲೇಜಿನಲ್ಲಿರಿಸಲಾಗಿದೆ. ಮರಣೋತ್ತರ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು.

Leave a Reply

Your email address will not be published. Required fields are marked *

You cannot copy content of this page