ಕಿಳಿಂಗಾರಿನಲ್ಲಿ ಶ್ರೀ ಸತ್ಯಸಾಯಿ ಬಾಬಾರ ೯೮ನೇ ಜನ್ಮದಿನಾಚರಣೆ

ಬದಿಯಡ್ಕ: ಹಿರಿಯರ ಆದರ್ಶ ಗಳನ್ನು ಮುಂದುವರಿಸಿಕೊAಡು ಹೋಗುವ ಮಕ್ಕಳು ಸಮಾಜದಲ್ಲಿ ಬೆಳೆದುಬರುವಂತಾಗಬೇಕು. ಅದಕ್ಕಾಗಿ ನಮ್ಮ ಮಕ್ಕಳಿಗೆ ತಾಯಿಯೇ ಗುರು ವಾಗಿ ಉತ್ತಮ ಸಂಸ್ಕಾರ ನೀಡುವ ಕಾರ್ಯವನ್ನು ಮಾಡಬೇಕು. ಸೇವಾ ಕಾರ್ಯಗಳಿಗೆ ರಾಜಕೀಯವೊಂದೇ ವೇದಿಕೆಯಲ್ಲ ಎಂಬುದನ್ನು ನಾವು ಇಲ್ಲಿಕಾಣಬಹುದಾಗಿದೆ ಎಂದು ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅಭಿಪ್ರಾಯಪಟ್ಟರು.
ಕಿಳಿಂಗಾರು ಸಾಯಿಮಂದಿರದಲ್ಲಿ ನಿನ್ನೆ ಜರಗಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ೯೮ನೇ ಜನ್ಮದಿನಾಚರಣೆಯ ಸಂದರ್ಭ ಬಡಜನತೆಗೆ ಕಿಳಿಂಗಾರು ದಿ| ಸಾಯಿರಾಂಭಟ್ ಮನೆಯವರು ನೀಡುವ ಹೊಲಿಗೆಯಂತ್ರ ವಿತರಣೆ ಯನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ದಿವಂಗತ ಸಾಯಿರಾಂ ಭಟ್‌ರ ಸೇವಾಕಾರ್ಯಗಳು ಇನ್ನೂ ನಿರಂತರ ಮುಂದುವರಿಯುವA ತಾಗಲಿ ಎಂದವರು ಆಶಿಸಿದರು. ಸಾಯಿರಾಂ ಕೃಷ್ಣ ಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಹಿರಿಯರ ಮನೋಭಿಲಾಷೆಯನ್ನು ಮುಂದುವ ರಿಸಿಕೊಂಡು ಹೋಗಬೇಕೆಂಬ ಮಹದಾಸೆಯಿದೆ ಎಂದರು. ಒಟ್ಟು ಆರುಮಂದಿಗೆ ಹೊಲಿಗೆ ಯಂತ್ರ, ತಲಾ ಒಬ್ಬರಿಗೆ ಮನೆ ರಿಪೇರಿ, ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ವಿತರಿಸಲಾಯಿತು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ, ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷ ಎಂ.ಅಬ್ಬಾಸ್, ಜನಪ್ರತಿನಿದಿsಗಳಾದ ಶ್ಯಾಮಪ್ರಸಾದ ಮಾನ್ಯ, ಡಿ.ಶಂಕರ, ಸೌಮ್ಯಾ ಮಹೇಶ್ ನಿಡುಗಳ, ಅಶ್ವಿನಿ ಎಂ. ನೀರ್ಚಾಲು, ಲಲಿತಾ ಟೀಚರ್, ರೇವತಿ ಟೀಚರ್, ಶಾರದಾ ಸಾಯಿರಾಂ ಭಟ್, ಶೀಲಾ ಕೆ.ಎನ್.ಭಟ್ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಎನ್.ಸುಬ್ರಾಯ ಭಟ್ ವಂದಿಸಿದರು. ವೆಂಕಟೇಶ್ ರಾವ್ ಮಂಗಳೂರು ತಂಡದವರು ಭಜನಾ ಸೇವೆ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

You cannot copy content of this page