ಕೆಪಿಎಸ್ಟಿಎ ಸದಸ್ಯತನ ಅಭಿಯಾನ ಆರಂಭ
ಮೀಯಪದವು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ (ಕೆಪಿಎಸ್ಟಿಎ) ಇದರ ಸದಸ್ಯತನ ವಿತರಣೆಯ ಮಂಜೇಶ್ವರ ಉಪಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಿತು. ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಇವರಿಗೆ ಕೆಪಿಎಸ್ಟಿಎ ಉಪಜಿಲ್ಲಾ ಕಾರ್ಯದರ್ಶಿ ಒ.ಎಂ. ರಶೀದ್ ಸದಸ್ಯತನ ನೀಡಿದರು. ಕಂದಾಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಜನಾರ್ದನನ್ ಕೆ.ವಿ, ಜಿಲ್ಲಾ ಜೊತೆ ಕಾರ್ಯದರ್ಶಿ ವಿಮಲ್ ಅಡಿಯೋಡಿ, ಉಪಜಿಲ್ಲಾ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಮೀಯಪದವು, ಶ್ರೀನಿವಾಸ ಕೆ.ಎಚ್. ಧರ್ಮತ್ತಡ್ಕ, ಸೌಮ್ಯಾ ಪಿ, ರವಿಶಂಕರ ಕೆ. ಭಾಗವಹಿಸಿದರು.