ಕೆರೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಬಾಲಕರು ಮುಳುಗಿ ದಾರುಣ ಮೃತ್ಯು: ಓರ್ವ ಆಸ್ಪತ್ರೆಗೆ ದಾಖಲು
ಹೊಸದುರ್ಗ: ಸ್ನಾನಕ್ಕೆಂದು ಕೆರೆಗಿಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ದಾರುಣ ಘಟನೆ ಕಾಞಂಗಾಡ್ ಬಳಿಯ ಮಾಣಿಕೋತ್ ಎಂಬಲ್ಲಿ ಸಂಭವಿಸಿದೆ. ಇದೇ ವೇಳೆ ಅಸ್ವಸ್ಥಗೊಂಡ ಓರ್ವ ಬಾಲಕನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಡಿಯನ್ ಪಾಲಕ್ಕಿ ನಿವಾಸಿ ಎಂ.ಎನ್. ಅಸೀಸ್-ಆಯಿಷ ದಂಪ ತಿಯ ಪುತ್ರ ಅಫಾಸ್ (9), ಕರ್ನಾ ಟಕದ ಕೊಡಗು ನಿವಾಸಿಗಳೂ, ಮಡಿ ಯಾನ್ನ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುವ ಹೈದರ್- ಆಬಿದ ದಂಪತಿ ಯ ಪುತ್ರ ಅನ್ವರ್ (10) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅನ್ವರ್ನ ಸಹೋದರ ಹಾಶಿಂ (12) ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ.
ಮಾಣಿಕೋತ್ನ ಹಳೆಯ ಮಸೀದಿ ಸಮೀಪದಲ್ಲಿರುವ ಕೆರೆಯಲ್ಲಿ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ಅಪರಾಹ್ನ ೩.೪೫ಕ್ಕೆ ಈ ದುರ್ಘಟನೆ ಸಂಭವಿಸಿದೆ. ಅಫಾಸ್, ಅನ್ವ ರ್ ಹಾಗೂ ಹಾಶಿಂ ಎಂಬಿವರು ಕೆರೆಗೆ ಇಳಿದಿದ್ದರು. ಅನ್ವರ್ನ ಇನ್ನೋರ್ವ ಸಹೋದರ ಅಜ್ವತ್ ಕೆರೆಯ ದಡದಲ್ಲಿ ನಿಂತಿದ್ದನು. ಈ ವೇಳೆ ಕೆರೆಗಿಳಿದ ಮೂವರು ಮುಳುಗುತ್ತಿರುವುದನ್ನು ಕಂಡ ಅಜ್ವತ್ ಸ್ಥಳೀಯರಿಗೆ ವಿಷಯ ತಿಳಿಸಿದ್ದನು. ಕೂಡಲೇ ತಲುಪಿದ ನಾಗರಿಕರು ಮೂವರನ್ನೂ ಕೆರೆಯಿಂದ ಮೇಲಕ್ಕೆತ್ತಿ ಕಾಞಂಗಾಡ್ನ ಆಸ್ಪತ್ರೆಗೆ ತಲುಪಿಸಿ ದರೂ ಅಫಾಸ್ ಹಾಗೂ ಅನ್ವರ್ರ ಜೀವ ರಕ್ಷಿಸಲಾಗಲಿಲ್ಲ.
ಅನ್ವರ್ನ ತಂದೆ- ತಾಯಿ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಅಜ್ಜಿಯ ಜೊತೆ ಮಕ್ಕಳು ಮಡಿಯಾನ್ ನಲ್ಲಿದ್ದಾರೆ. ಮೃತಪಟ್ಟ ಅನ್ವರ್ ಹಾಗೂ ಅಫಾಸ್ ಚಿತ್ತಾರಿ ಹಿಮಾಯತ್ತುಲ್ ಇಸ್ಲಾಂ ಯುಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಅಫಾಸ್ಗೆ ಅರ್ಫಾತ್- ಅಫ್ನ ಎಂಬಿಬ್ಬರು ಸಹೋದರರಿದ್ದಾರೆ. ಬಾಲಕರ ಅಕಾಲಿಕ ಸಾವಿನಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ.