ತಿರುವನಂತಪುರ: ವಿವಾದಾತ್ಮಕ ಕೇರಳ ಸ್ಟೋರಿ ಸಿನಿಮಾವನ್ನು ದೂರದರ್ಶನದಲ್ಲಿ ಪ್ರದರ್ಶಿಸುವ ಯತ್ನದಿಂದ ಕೇಂದ್ರ ಸರಕಾರಹಿಂದಕ್ಕೆ ಸರಿಯಬೇಕೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆಗ್ರಹಪಟ್ಟಿದ್ದಾರೆ.ಇದು ಜನರನ್ನು ಒಡೆದು ರಾಜಕೀಯ ಲಾಭ ಗಿಟ್ಟಿಸುವ ರೀತಿಯ ಸಿನಿಮಾ ವಾಗಿದೆ. ಅದು ಕೇರಳದಲ್ಲಿ ಸಫಲವಾಗದು. ಸಂಘ ಪರಿವಾ ರದವರು ಉದ್ದೇಶಪೂರ್ವಕ ವಾಗಿಯೇ ಈ ಸಿನಿಮಾವನ್ನು ಚುನಾವಣೆಯ ವೇಳೆ ದೂರ ದರ್ಶನದಲ್ಲಿ ಪ್ರದರ್ಶಿಸುವಂತೆ ಮಾಡುವ ಯತ್ನದಲ್ಲಿ ತೊಡಗಿದ್ದಾರೆ. ಅದನ್ನು ಅಂಗೀಕರಿಸುವಂತಿಲ್ಲವೆಂದು ಅವರು ಹೇಳಿದ್ದಾರೆ.







