ಕೊಂಡೆವೂರು: ಕೊರಗ ಸಮಾಜ ಬಂಧುಗಳ ಕ್ರೀಡೋತ್ಸವ

ಉಪ್ಪಳ: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕೊರಗ ಸಮಾಜ ಬಂಧುಗಳ ಕ್ರೀಡೋತ್ಸವ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಶ್ರೀ ಯೋಗಾ ನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಭಾಸ್ಕರ ರೈ ಮಂಜಲ್ತೋಡಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಉದ್ಘಾಟಿಸಿದರು. ನಂತರ ಅವರು ಮÁತನಾಡಿ, ಕೀಳರಿಮೆ ತೊರೆದು ಒಂದಾಗಿ ಬಾಳೋಣ ಎಂದು ಕರೆನೀಡಿದರು. “ಕ್ರೀಡೆಯ ಮೂಲಕ ನಮ್ಮ ನಡುವೆ ಬಾಂಧವ್ಯ ಬೆಳೆಯುತ್ತದೆ, ಈ ಕ್ರೀಡೋತ್ಸವದ ಮೂಲಕ ನಾವು ಒಂದಾಗಿ ಬೆಳೆಯೋಣ” ಎಂದು ಭಾಸ್ಕರ ರೈ ನುಡಿದರು. ಶ್ರೀಗಳು ಆಶೀರ್ವಚನ ನೀಡಿ, “ಕೊರಗ ಸಮಾಜ ದೇಶದ ಅವಿಭಾಜ್ಯ ಅಂಗ, ಅದಕ್ಕಾಗಿ ನಾವು ನಮ್ಮ ದೌರ್ಬಲ್ಯ ಕೀಳರಿಮೆಗಳನ್ನು ತೊರೆದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಒಗ್ಗೂಡಿ ಸಾಗ ಬೇಕು ಅದಕ್ಕಾಗಿ ದ. ೩೧ರಂದು ನಡೆ ಯುವ ಕೊರಗ ಸಮಾಜ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಸಾಮರ್ಥ್ಯ ತೋರಿಸೋಣ, ಕೊಂಡೆವೂರು ಮಠವು ನಿಮಗೆ ಸರ್ವರೀತಿಯಲ್ಲೂ ಸಹಕಾರ ನೀಡುತ್ತದೆ” ಎಂದು ನುಡಿದರು. ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು ಸಮಾಜ ಸಂಗಮದ ವಿವರಗಳನ್ನು ನೀಡಿದರು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮಾತನಾಡಿದರು. ಸದಾಶಿವ ಮೋಂತಿಮಾರು ನಿರೂಪಿಸಿದರು.ನಂತರ ಕಬಡ್ಡಿ, ವಾಲಿಬಾಲ್, ಬುಟ್ಟಿ ಹೆಣೆಯುವುದು, ಲಿಂಬೆ ಚಮಚ, ಇತ್ಯಾದಿ ಸ್ಪರ್ಧೆಗಳು ನಡೆದವು.

Leave a Reply

Your email address will not be published. Required fields are marked *

You cannot copy content of this page