ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣ: ಮಂತ್ರವಾದಿನಿ ಸೇರಿದಂತೆ ಐವರು ಆರೋಪಿಗಳ ಮೇಲಿನ ಚಾರ್ಜ್ ಶೀಟ್ ಇಂದು ಸಲ್ಲಿಕೆ

ಕಾಸರಗೋಡು: ಗಲ್ಫ್ ಉದ್ಯಮಿ ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕ್ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿ ಬಂಧಿತರಾದ ಆರೋಪಿಗಳ ಪೈಕಿ ಮಂತ್ರವಾದಿನಿ ಸೇರಿದಂತೆ ಐವರು ಆರೋಪಿಗಳ ಮೇಲಿನ ದೋಷಾರೋಪ ಪಟ್ಟಿಯನ್ನು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ. ಜೋನ್ಸನ್ ಅವರು ಇಂದು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ಕ್ಕೆ ಇಂದು ಸಲ್ಲಿಸುವರು.
ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿ ಹಾಗೂ ಈಗ ಉದುಮ ಬಾರಾ ಮೀತಲ್ ಮಂಜಿಲ್ನ ಮಾಂuಟಿಜeಜಿiಟಿeಜಡ್ ಕಳಿಕುನ್ನಿನಲ್ಲಿ ವಾಸಿಸುತ್ತಿರುವ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (35), ಪೂಚಕ್ಕಾಡ್ ದೊಡ್ಡ ಮಸೀದಿ ಬಳಿಯ ಪಿ.ಎಂ. ಅನ್ಸಿಫಾ (36) ಮತ್ತು ಮಧೂರು ಕೊಲ್ಯ ನಿವಾಸಿ ಆಯಿಷಾ (45) ಎಂಬವರ ಮೇಲಿನ ದೋಷಾರೋಪ ಪಟ್ಟಿಯನ್ನು ಡಿವೈಎಸ್ಪಿ ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಕೊಲೆ ನಡೆದ ಮೂರು ತಿಂಗಳೊಳಗಾಗಿ ತನಿಖಾ ತಂಡ ಈ ಆರೋಪಿಗಳ ಮೇಲಿನ ದೋಷಾರೋಪ ಪಟ್ಟಿಯನ್ನು ತಯಾರಿಸಿದೆ. ಕೊಲೆ ನಡೆದ ದಿನದಿಂದಲೇ ಪೊಲೀಸರು ನಡೆಸಿದ ಅವಿರತ ಪ್ರಯತ್ನದ ಫಲವಾಗಿ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 2025 ಎಪ್ರಿಲ್ 14ರಂದು ಅಬ್ದುಲ್ ಗಫೂರ್ ಹಾಜಿಯನ್ನು ಅವರ ಮನೆಯಲ್ಲೇ ಕೊಲೆಗೈಯ್ಯಲಾಗಿತ್ತು.
ಮಂತ್ರವಾದಕ್ಕಾಗಿ ಅಬ್ದುಲ್ ಗಫೂರ್ ಹಾಜಿಯವರಿಂದ ಈ ಪ್ರಕರಣದ ಮುಖ್ಯ ಆರೋಪಿಗಳು 596 ಪವನ್ (4.76 ಕಿಲೋ) ಚಿನ್ನ ಪಡೆದಿದ್ದರು. ಅದನ್ನು ಹಿಂತಿರುಗಿಸುವAತೆ ಹಾಜಿಯವರು ಬಳಿಕ ಆರೋಪಿಗಳಲ್ಲಿ ತಿಳಿಸಿದ್ದರು. ಆ ಬಳಿಕ ಹಾಜಿಯವರನ್ನು ಕೊಲೆಗೈಯ್ಯಲಾಗಿ ತ್ತೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟವಾಗಿದೆ. ಮಂತ್ರವಾದದ ಹೆಸರಲ್ಲಿ ಆರೋಪಿಗಳು ಹಾಜಿಯಿಂದ ಪಡೆದಿದ್ದ ಚಿನ್ನದ ಪೈಕಿ 117 ಪವನ್ ಚಿನ್ನವನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳುವಲ್ಲಿ ತನಿಖಾ ತಂಡ ಸಫಲವಾಗಿದೆ. ಬಾಕಿ ಚಿನ್ನಕ್ಕಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ.
ಬAಧಿತ ಆರೋಪಿಗಳ ಪೈಕಿ ಐದನೇ ಆರೋಪಿ ಕೊಲ್ಯದ ಆಯಿಶಾಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇತ್ತೀಚೆಗೆ ಶರ್ತಬದ್ಧ ಜಾಮೀನು ಮಂಜೂರು ಮಾಡಿತ್ತು. ಆಕೆ ಈ ಕೊಲೆ ಪ್ರಕರಣದಲ್ಲಿ ನೇರವಾಗಿ ಹಾಜರಾಗಿಲ್ಲವೆಂದೂ ಚಿನ್ನವನ್ನು ಮಾರಾಟ ಮಾಡಲು ಆಕೆ ಇತರ ಆರೋಪಿಗಳಿಗೆ ಸಹಾಯ ಒದಗಿಸಿದ್ದಳಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಇತರ ನಾಲ್ವರು ಆರೋಪಿಗಳು ಜಾಮೀನು ಲಭಿಸದೇ ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.
ಈ ಕೊಲೆ ಪ್ರಕರಣದಲ್ಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದಾರೆ. ಆ ಪೈಕಿ ಇನ್ನೋರ್ವ ಆರೋಪಿ ಪಳ್ಳಿಕ್ಕೆರೆ ಪೂಚಕ್ಕಾಡ್ ಬಿಸ್ಮಿಲ್ಲಾ ರೋಡ್ ಅಲ್ ಬದರ್ ಮಂಜಿಲ್ನ ನಿವಾಸಿ ಈ ಹಿಂದೆ ಗಲ್ಫ್ನಲ್ಲಿದ್ದ ಪಿ.ಎಂಸ್. ಸೈಫುದ್ದೀನ್ ಬಾದುಷಾ (33) ಎಂಬಾತನ್ನು ಪೊಲೀ ಸರು ಬಂಧಿಸಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನ ವಿರುದ್ಧದ ಚಾರ್ಜ್ ಶೀಟ್ನ್ನು ಪೊಲೀಸರು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page