ಗಾಂಜಾ ವಶ: ಓರ್ವ ಸೆರೆ
ಉಪ್ಪಳ: ಉಪ್ಪಳ ಕುರ್ಚಿಪ್ಪಳ್ಳದಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಡಿಯವರ ನೇತೃತ್ವದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 39 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕುರ್ಚಿಪಳ್ಳದ ಮೊಹಮ್ಮದ್ ಅರ್ಶಾದ್ 50) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಈ ಕಾರ್ಯಾ ಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್)ಗಳಾದ ಸುಧೀಂದ್ರನ್ ಎಂ.ವಿ, ಜನಾರ್ದನನ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ರಮೇಶನ್ ಮತ್ತು ಸ್ವಾತಿ ಯು ಎಂಬಿವರು ಒಳಗೊಂಡಿದ್ದರು.