ಚನ್ನಿಕೋಡಿಯಲ್ಲಿ ಗುಡ್ಡೆ ಕುಸಿತ: ಮನೆ ಮಂದಿ ಭೀತಿಯಲ್ಲಿ
ಸೀತಾಂಗೋಳಿ: ಪುತ್ತಿಗೆ ಪಂಚಾಯತ್ನ 1ನೇ ವಾರ್ಡ್ ಚನ್ನಿಕೋಡಿ ಎಂಬಲ್ಲಿ ಡೆನಿಸ್ ಜೋಸೆಫ್ ಎಂಬವರ ಮನೆ ಸಮೀಪದಲ್ಲಿ ಗುಡ್ಡೆ ಕುಸಿದು ನೀರು ಸಂಗ್ರಹಗೊಂಡಿದೆ. ಮಳೆ ಬಿರುಸಾಗಿ ಮುಂದುವರಿದರೆ ಇಲ್ಲಿನ ತೋಟ ಪೂರ್ತಿಯಾಗಿ ಮುಳುಗುವ ಸಾಧ್ಯತೆ ಇದ್ದು, ಮನೆ ಮಂದಿ ಆತಂಕಿತರಾಗಿದ್ದಾರೆ. ಪುತ್ತಿಗೆ ಪಂಚಾಯತ್ ತಂಡ ನಿನ್ನೆ ಸಂಜೆ ಈ ಪ್ರದೇಶಕ್ಕೆ ಭೇಟಿ ನೀಡಿದೆ. ಪಂಚಾಯತ್ ಕಾರ್ಯದರ್ಶಿ ನಾರಾಯಣ ನಾಯ್ಕ್, ಸಹಾಯಕ ಕಾರ್ಯದರ್ಶಿ ಮನೋಜ್ ಮುಕುಂದನ್, ಎನ್ಆರ್ಜಿ ಇಂಜಿನಿಯರ್ ಪ್ರಜ್ವಲ್, ಸಂದೇಶ್, ಪಂ. ಸದಸ್ಯ ಗಂಗಾಧರ ತಂಡದಲ್ಲಿದ್ದರು.